ಬಿಜೆಪಿ-ಜೆಡಿಎಸ್ ಮೈತ್ರಿ ಕರ್ನಾಟಕದಲ್ಲಿ ನಡೆಯಲ್ಲ, ಎರಡು ಪಕ್ಷಗಳಿಗೂ ಪ್ರಯೋಜನವಿಲ್ಲ: ಹೆಚ್ ವಿಶ್ವನಾಥ್

|

Updated on: Feb 23, 2024 | 1:33 PM

ತಾವು ಸಂಸದನಾಗಿ, ರಾಜ್ಯದಲ್ಲಿ ಮಂತ್ರಿಯಾಗಿ ಜನ ನೆನಪಿಟ್ಟುಕೊಳ್ಳುವ ಸಾಧನೆ ಮಾಡಿದ್ದೇನೆಂದು ಹೇಳುವ ವಿಶ್ವನಾಥ್, ಶಾಲಾ ಮಕ್ಕಳಿಗಾಗಿ ತಾವು ಆರಂಭಿಸಿದ ಮಧ್ಯಾಹ್ನದ ಬಿಸಿಯೂಟ ಯೋಜೆನೆಯಿಂದ 84 ಲಕ್ಷ ಶಾಲಾ ಮಕ್ಕಳಿಗೆ ಪ್ರಯೋಜನವಾಗುತ್ತಿದೆ, ಶಾಲೆಗಳಲ್ಲಿ ತಾವು ಕಟ್ಟಿಸಿದ ಶೌಚಾಲಯಗಳನ್ನು ದುರಸ್ತಿ ಮಾಡಿಸಿಕೊಳ್ಳುವುದು ಕೂಡ ನಂತರದ ಸರ್ಕಾರಗಳಿಗೆ ಸಾಧ್ಯವಾಗಿಲ್ಲ ಎಂದರು.

ಮೈಸೂರು: ಹಿರಿಯ ಕಾಂಗ್ರೆಸ್ ನಾಯಕ ಹೆಚ್ ವಿಶ್ವನಾಥ್ (H Vishwanath) ಆಗಾಗ ಪತ್ರಿಕಾ ಗೋಷ್ಟಿ ನಡೆಸಿ ತಾವಿನ್ನೂ ರಾಜಕೀಯದಲ್ಲಿ ಅಸ್ತಿತ್ವದಲ್ಲಿರುವುದನ್ನು ಸಾದರಪಡಿಸುತ್ತಿರುತ್ತಾರೆ. ಇಂದು ಮೈಸೂರಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಅವರು ಬಿಜೆಪಿ-ಜೆಡಿಎಸ್ ಮೈತ್ರಿ (JDS BJP Alliance) ರಾಜ್ಯದಲ್ಲಿ ನಡೆಯಲ್ಲ, ಅದನ್ನು ವಿಧಾನ ಪರಿಷತ್ ಪದವೀಧರ ಕ್ಷೇತ್ರದ (graduates constituency) ಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರರು ಸಾಬೀತು ಮಾಡಿದ್ದಾರೆ ಎಂದು ಹೇಳಿದರು. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಗೆ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯ ಸೋಲಾಯಿತು. ಅದೇ ಕಾರಣಕ್ಕೆ ತಾವೆಲ್ಲ ದಂಗೆಯೆದ್ದು ಬಿಜೆಪಿಗೆ ಹೋಗಿದ್ದು ಅಂತ ತಮ್ಮ ಬಂಡಾಯವನ್ನು ಸಮರ್ಥಿಸಿಕೊಳ್ಳುವ ಅವರು, 2024 ಲೋಕ ಸಭಾ ಚುನಾವಣೆಗಾಗಿ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿರುವುದು ಎರಡೂ ಪಕ್ಷಗಳಿಗೆ ನೆರವಾಗದು ಎನ್ನುತ್ತಾರೆ. ನಂತರ ತಾವು ಸಂಸದನಾಗಿ, ರಾಜ್ಯದಲ್ಲಿ ಮಂತ್ರಿಯಾಗಿ ಜನ ನೆನಪಿಟ್ಟುಕೊಳ್ಳುವ ಸಾಧನೆ ಮಾಡಿದ್ದೇನೆಂದು ಹೇಳುವ ವಿಶ್ವನಾಥ್, ಶಾಲಾ ಮಕ್ಕಳಿಗಾಗಿ ತಾವು ಆರಂಭಿಸಿದ ಮಧ್ಯಾಹ್ನದ ಬಿಸಿಯೂಟ ಯೋಜೆನೆಯಿಂದ 84 ಲಕ್ಷ ಶಾಲಾ ಮಕ್ಕಳಿಗೆ ಪ್ರಯೋಜನವಾಗುತ್ತಿದೆ, ಶಾಲೆಗಳಲ್ಲಿ ತಾವು ಕಟ್ಟಿಸಿದ ಶೌಚಾಲಯಗಳನ್ನು ದುರಸ್ತಿ ಮಾಡಿಸಿಕೊಳ್ಳುವುದು ಕೂಡ ನಂತರದ ಸರ್ಕಾರಗಳಿಗೆ ಸಾಧ್ಯವಾಗಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on