ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramaiah) ಮಾತೇ ಹಾಗೆ, ಸದನದಲ್ಲಿ ಕಾರ್ಯಕಲಾಪ ನಡೆಯುವಾಗ ಮಾತಾಡಲು ಎದ್ದುನಿಂತರೆ ಉಳಿದವರು ಕುಳಿತುಕೊಂಡು ಕೇಳಬೇಕು. ಇವತ್ತು ಸದನದಲ್ಲಿ ಬಿಜೆಪಿ ಕಾರ್ಯಕರ್ತನ (BJP worker) ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಗೃಹ ಸಚಿವ (home minister) ಮತ್ತು ಸರ್ಕಾರದ ಹೇಳಿಕೆ ಆಗ್ರಹಿಸಿ ಸದನದಲ್ಲಿ ಧರಣಿ ಶುರುಮಾಡಿದಾಗ ಮಾತಾಡಲು ಎದ್ದು ನಿಂತ ಸಿದ್ದರಾಮಯ್ಯ ಅನುಭವ ಮತ್ತು ವಿಷಯಾಧಾರಿತ ಮಾರುಗಳಿಂದ ವಿಪಕ್ಷ ಶಾಸಕರ ಬಾಯಿ ಮುಚ್ಚಿಸಿದರು. ಸಿದ್ದರಾಮಯ್ಯ ಶಾಂತರಾಗಿಯೇ ವಿಪಕ್ಷದ ಟೀಕೆಗಳಿಗೆ ಉತ್ತರ ನೀಡುತ್ತಾರೆ. ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿರುವುದಕ್ಕೆ ಸಂಬಂಧಿಸಿದಂತೆ, ಗೃಹ ಸಚಿವರು ಹೇಳಿಕೆ ಖಂಡಿತ ನೀಡುತ್ತಾರೆ, ನಿಯಮಾವಳಿಗಳ ಪ್ರಕಾರ ಪ್ರಶ್ನೆ ಕೇಳಿದಾಗ ಕೂಡಲೇ ಉತ್ತರ ನೀಡಬಹುದು ಇಲ್ಲವೇ ಉತ್ತರಿಸಲು ಎರಡು ದಿನಗಳ ಸಮಯಾವಕಾಶ ಇರುತ್ತದೆ. ಗೃಹ ಸಚಿವರು ಸದನಕ್ಕೆ ಬಂದ ಕೂಡಲೇ ಉತ್ತರ ನೀಡಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ