ಸ್ಕಾಡಾ ಯೋಜನೆ ವಿಚಾರ: ಮಾಜಿ ಸಚಿವ ಎಂ.ಬಿ ಪಾಟೀಲ್ ವಿರುದ್ಧ ಹರಿಹಾಯ್ದ ಶಾಸಕ ರಾಜುಗೌಡ
ಸ್ಕಾಡಾ 2ನೇ ಹಂತದ ಕಾಮಗಾರಿ ಟೆಂಡರ್ ಯಾವಾಗ ಆಗಿದೆ ಗೊತ್ತಾ? 1,050 ಕೋಟಿ ಹಣ ಮಂಜೂರು ಮಾಡಿಸಿದ್ದೇನೆ. ಈ ಕಾಮಗಾರಿ ನೀವಿದ್ದಾಗ ಆಗಿತ್ತು ಅಂದರೇ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. 2018ರಲ್ಲಿ ನಾನು ಶಾಸಕನಾದ ಮೇಲೆ ಕಾಮಗಾರಿ ಟೆಂಡರ್ ಆಗಿದ್ದರೇ ನೀನು ರಾಜಕೀಯದಿಂದ ನಿವೃತ್ತಿ ಆಗುತ್ತೀಯಾ ಎಂದು ಬಿಜೆಪಿ ಶಾಸಕ ರಾಜುಗೌಡ, ಕಾಂಗ್ರೆಸ್ ಶಾಸಕ ಎಂ.ಬಿ ಪಾಟೀಲ್ ಅವರಿಗೆ ಸವಾಲು ಹಾಕಿದ್ದಾರೆ.
ಯಾದಗಿರಿ: ಸ್ಕಾಡಾ 2ನೇ ಹಂತದ ಕಾಮಗಾರಿ ಟೆಂಡರ್ ಯಾವಾಗ ಆಗಿದೆ ಗೊತ್ತಾ? 1,050 ಕೋಟಿ ಹಣ ಮಂಜೂರು ಮಾಡಿಸಿದ್ದೇನೆ. ಈ ಕಾಮಗಾರಿ ನೀವಿದ್ದಾಗ ಆಗಿತ್ತು ಅಂದರೇ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. 2018ರಲ್ಲಿ ನಾನು ಶಾಸಕನಾದ ಮೇಲೆ ಕಾಮಗಾರಿ ಟೆಂಡರ್ ಆಗಿದ್ದರೇ ನೀನು ರಾಜಕೀಯದಿಂದ ನಿವೃತ್ತಿ ಆಗುತ್ತೀಯಾ ಎಂದು ಬಿಜೆಪಿ ಶಾಸಕ ರಾಜುಗೌಡ (BJP MLA Rajugouda), ಕಾಂಗ್ರೆಸ್ ಶಾಸಕ ಎಂ.ಬಿ ಪಾಟೀಲ್ (Congress MLA MB Patil) ಅವರಿಗೆ ಸವಾಲು ಹಾಕಿದ್ದಾರೆ. 2017ರಲ್ಲಿ ಸ್ಕಾಡಾ ಗೇಟ್ಗಳನ್ನು (ನಾರಾಯಣಪುರ ಎಡದಂಡೆ ಕಾಲುವೆಗೆ ಜಿಐಎಸ್ ಆಧಾರಿತ ಸ್ವಯಂಚಾಲಿತ ಯಾಂತ್ರೀಕೃತ ತಂತ್ರಜ್ಞಾನ SCADA (Supervisory Control and data acquisition) ಯೋಜನೆ.) ನಾವು ಉದ್ಘಾಟಿಸಿದ್ದೇವೆ ಎಂಬ ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಹರಿಹಾಯ್ದ ರಾಜಯಗೌಡ ನಿನ್ನ ತರಹ ನಾನು ಪುಕ್ಕಟೆ ಮಾತನಾಡುವುದಿಲ್ಲ. 2017ರಲ್ಲೇ ಕಾಮಗಾರಿ ಆಗಿದ್ದರೇ ರಾಜಕೀಯದಿಂದ ನಿವೃತ್ತಿ ಪಡೆದು, ನಿಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಅಂತ ನಾನೇ ಪ್ರಚಾರ ಮಾಡುತ್ತೇನೆ. ಇಲ್ಲದಿದ್ದರೇ ನಾನು ಹಾಕಿದ ಸವಾಲು ನೀನು ಸ್ವೀಕರಿಸು ಎಂದಿದ್ದಾರೆ.
ಪರಪ್ಪನ ಅಗ್ರಹಾರ ಜೈಲಲ್ಲೇ ಮಾರಾಟವಾಗುತ್ತಿತ್ತು ಫೋನ್! 1 ಲಕ್ಷ ರೂ.ಗೆ ಸೇಲ್
ಕೆಪಿಎಸ್ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್ಗಳು ಬಂದ್
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ

