Assembly Session: ಮುಖ್ಯಮಂತ್ರಿಗಳಿಗೆ ಬಹಳ ಹತ್ತಿರವಿದ್ದೀರಿ ಅಂತ ಜಮೀರ್ ಅಹ್ಮದ್ ಕಾಲೆಳೆದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್
ಆದರೆ ಸಚಿವ ಜಮೀರ್ ಶಾಸಕನ ಟ್ರ್ಯಾಪ್ ಗೆ ಬೀಳದೆ ರಸ್ತೆ ತನ್ನ ಖಾತೆಯ ಸುಪರ್ದಿಗೆ ಬರಲ್ಲ ಎಂದು ಹೇಳಿ ಕೂತುಬಿಡುತ್ತಾರೆ.
ಬೆಂಗಳೂರು: ವಿಧಾನ ಮಂಡಲದ ಕಾರ್ಯಕಲಾಪ ನಡೆಯುವಾಗ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ (ST Somashekar ) ಮತ್ತು ವಸತಿ ಖಾತೆ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ನಡುವೆ ಕಿರು ಅವಧಿಯ ಒಂದು ಜುಗಲ್ ಬಂದಿ ನಡೆಯಿತು. ವಸತಿ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಬಡಾವಣೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿಲ್ಲ ಎಂದು ಸೋಮಶೇಖರ್ ಹೇಳಿದಾಗ, ಸಚಿವ ಜಮೀರ್ ಎಲ್ಲ ವಿವರಗಳನ್ನು ಒದಗಿಸಿ ಅಪ್ರೋಚಿಂಗ್ ರಸ್ತೆ ಲೋಕೋಪಯೋಗಿ ಇಲಾಖೆ ಸುಪರ್ದಿಗೆ ಬರೋದ್ರಿಂದ ತಾನು ಅದನ್ನು ಮಾಡಲಾಗದು ಎನ್ನುತ್ತಾರೆ. ಸೋಮಶೇಖರ್ ಎದ್ದು ನಿಂತು, ನೀವು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಹಳ ಹತ್ತಿರದಲ್ಲೀದ್ದೀರಿ, ಅವರಿಂದ ಯಾವುದಾದರೂ ಅನುದಾನ ಪಡೆದು ರಸ್ತೆ ಮಾಡಿಸಿಕೊಡಬಹುದು ಅಂತ ಕಾಲೆಳೆಯುತ್ತಾರೆ. ಆದರೆ ಸಚಿವ ಜಮೀರ್ ಶಾಸಕನ ಟ್ರ್ಯಾಪ್ ಗೆ ಬೀಳದೆ ರಸ್ತೆ ತನ್ನ ಖಾತೆಯ ಸುಪರ್ದಿಗೆ ಬರಲ್ಲ ಎಂದು ಹೇಳಿ ಕೂತುಬಿಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮನೆಯ ಹೊಸ್ತಿಲಿಗೆ ಯಾವ ಮರ ಉಪಯೋಗಿಸಿದ್ರೆ ಒಳ್ಳೇದಾಗುತ್ತೆ?

Daily Horoscope: ಶುಕ್ರನ ಸಂಚಾರದಿಂದ ಈ ರಾಶಿಯವರ ವ್ಯಾಪಾರದಲ್ಲಿ ಪ್ರಗತಿ

ಬಾಹ್ಯಾಕಾಶಕ್ಕೆ ಹಾರಿದ ಮಗನನ್ನು ಕಂಡು ಭಾವುಕರಾದ ಶುಭಾಂಶು ಶುಕ್ಲಾ ತಾಯಿ

ಭಾರತ-ಪಾಕಿಸ್ತಾನದ ಯುದ್ಧ ನಿಲ್ಲಿಸಿದ್ದು ನಾನೇ; ಹಳೇ ರಾಗ ಹಾಡಿದ ಟ್ರಂಪ್
