AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Polls: ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವ ಘೋಷಣೆ ಮಾಡಿದ ಆಯನೂರು ಮಂಜುನಾಥ್

Karnataka Assembly Polls: ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವ ಘೋಷಣೆ ಮಾಡಿದ ಆಯನೂರು ಮಂಜುನಾಥ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 19, 2023 | 10:16 AM

ಆಯನೂರು ಮಂಜುನಾಥ್ ರಾಜೀನಾಮೆ ಸಲ್ಲಿಸುವ ಬಗ್ಗೆ ಕಾಂಗ್ರೆಸ್​ ಪಕ್ಷವಾಗಲೀ ಆಥವಾ ಜೆಡಿಎಸ್ ಪಕ್ಷವಾಗಲೀ ಆಸಕ್ತಿ, ಕುತೂಹಲವೇನೂ ಪ್ರದರ್ಶಿಸಿಲ್ಲ.  

ಶಿವಮೊಗ್ಗ: ಸ್ಲಾಗ್ ಓವರ್ ಗಳಲ್ಲಿ ಬಿಜೆಪಿ ಪಟಪಟನೆ ವಿಕೆಟ್ ಕಳೆದುಕೊಳ್ಳುತ್ತಿದೆ. ಪಕ್ಷದ ವಿಧಾನ ಪರಿಷತ್ ಸದಸ್ಯರಾಗಿದ್ದ ಆಯನೂರು ಮಂಜುನಾಥ್ (Ayanur Manjunath) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಘೋಷಣೆ ಮಾಡಿದ್ದಾರೆ. ನಗರದಲ್ಲಿ ಇಂದು ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಮಂಜುನಾಥ್, ಮೇಲ್ಮನೆಗಿಂತ (Upper House) ಕಾನೂನುಗಳು ರೂಪುಗೊಳ್ಳುವ ವಿಧಾನ ಸಭೆಯಲ್ಲಿ (Assembly) ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದೆಂದು ಮನವರಿಕೆಯಾಗಿರುವುದರಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಅವರು ಹೇಳಿದರು. ಸ್ಪರ್ಧೆ ಯಾವ ಪಕ್ಷದ ಟಿಕೆಟ್​​ ನಿಂದ ಅನ್ನೋದನ್ನು ಅವರು ಸ್ಪಷ್ಟಪಡಿಸಲಿಲ್ಲ. ಅವರ ರಾಜೀನಾಮೆ ಬಗ್ಗೆ  ಕಾಂಗ್ರೆಸ್​ ಪಕ್ಷವಾಗಲೀ ಆಥವಾ ಜೆಡಿಎಸ್ ಪಕ್ಷವಾಗಲೀ ಆಸಕ್ತಿ, ಕುತೂಹಲವೇನೂ ಪ್ರದರ್ಶಿಸಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ