ಬೆಳಗಾವಿಯ ಕಾಗವಾಡದಲ್ಲಿ ವಿಜಯ ಸಂಕಲ್ಪ ಯಾತ್ರೆ ಭರ್ಜರಿಯಾಗಿತ್ತು, ಆದರೆ ಲೀಡ್ ಮಾಡುತ್ತಿದ್ದ ನಾಯಕರಲ್ಲಿ ಮುಖದಲ್ಲಿ ಮಾತ್ರ ಪ್ರೇತಕಳೆ!

ಅರುಣ್​ ಕುಮಾರ್​ ಬೆಳ್ಳಿ

Updated on: Mar 09, 2023 | 5:53 PM

ನಡುವೆ ಲಕ್ಷ್ಮಣ ಸವದಿ ನಡುವೆ ನಿಂತಿದ್ದಾರೆ, ಅವರ ಬಲಭಾಗಕ್ಕೆ ಶಶಿಕಲಾ ಜೊಲ್ಲೆ, ಎಡಭಾಗಕ್ಕೆ ರಮೇಶ್ ಜಾರಕಿಹೊಳಿ ಇದ್ದಾರೆ. ಸವದಿ ಗಂಟುಮೋರೆ ಹೊತ್ತು ನಿಂತಿದ್ದರೆ ಜಾರಕಿಹೊಳಿ ಮುಖದಲ್ಲಿ ಅನ್ಯಮನಸ್ಕತೆ.

ಬೆಳಗಾವಿ: ಜಿಲ್ಲೆಯ ಕಾಗವಾಡ ತಾಲ್ಲೂಕಿನ ಐನಾಪುರ ಗ್ರಾಮದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಭರ್ಜರಿಯಾಗಿ ನಡೆಯಿತು ಅನ್ನೋದು ನಿಸ್ಸಂಶಯ. ಆದರೆ ಯಾತ್ರೆಯನ್ನು ಲೀಡ್ ಮಾಡುತ್ತಿದ್ದ ಪಕ್ಷದ ಮೂವರು ನಾಯಕರಲ್ಲೇ ಸೌಹಾರ್ದತೆ, ಸಂವಹನದ ಕೊರತೆ ನೋಡುಗರಿಗೆ ಎದ್ದುಕಾಣುತಿತ್ತು. ವಿಡಿಯೋವನ್ನು ವೀಕ್ಷಿಸಿದರೆ ಅದು ಗೊತ್ತಾಗುತ್ತದೆ. ನಡುವೆ ಲಕ್ಷ್ಮಣ ಸವದಿ ನಡುವೆ ನಿಂತಿದ್ದಾರೆ, ಅವರ ಬಲಭಾಗಕ್ಕೆ ಶಶಿಕಲಾ ಜೊಲ್ಲೆ, ಎಡಭಾಗಕ್ಕೆ ರಮೇಶ್ ಜಾರಕಿಹೊಳಿ ಇದ್ದಾರೆ. ಸವದಿ ಗಂಟುಮೋರೆ ಹೊತ್ತು ನಿಂತಿದ್ದರೆ ಜಾರಕಿಹೊಳಿ ಮುಖದಲ್ಲಿ ಅನ್ಯಮನಸ್ಕತೆ. ಎಲ್ಲಿ ಬಂದು ಸಿಕ್ಹಾಕಿಕೊಂಡ್ನೋ ಯಪ್ಪಾ ಎಂಬ ಭಾವ! ಶಶಿಕಲಾ ಕಾಟಾಚಾರಕ್ಕೆ ಆಗೊಮ್ಮೆ ಈಗೊಮ್ಮೆ ಸವದಿ ಜೊತೆ ಮಾತಾಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.