AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Polls: ಬಿಎಸ್ ಯಡಿಯೂರಪ್ಪರನ್ನು ಕಾಣಲು ಬಂದ ಮಠಾಧೀಶರನ್ನು ಕಾರಲ್ಲಿ ಕೂರಿಸಿಕೊಂಡು ಸುತ್ತು ಹಾಕಿದ ಬಿವೈ ವಿಜಯೇಂದ್ರ

Karnataka Assembly Polls: ಬಿಎಸ್ ಯಡಿಯೂರಪ್ಪರನ್ನು ಕಾಣಲು ಬಂದ ಮಠಾಧೀಶರನ್ನು ಕಾರಲ್ಲಿ ಕೂರಿಸಿಕೊಂಡು ಸುತ್ತು ಹಾಕಿದ ಬಿವೈ ವಿಜಯೇಂದ್ರ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 31, 2023 | 2:50 PM

Share

ಇವತ್ತು ಪಕ್ಷದ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪರನ್ನು ಕಾಣಲು ಕೆಲ ಮಠಾಧೀಶರು ನಾಯಕರ ಕಾವೇರಿ ನಿವಾಸಕ್ಕೆ ಬಂದಿದ್ದರು.

ಬೆಂಗಳೂರು: ರಾಜ್ಯದ ಮಠಾಧೀಶರು ಚುನಾವಣೆ ಸಮಯದಲ್ಲಿ ಮುನಿಸಿಕೊಳ್ಳದಂತಿರಲು ಬಿಜೆಪಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಅನಿಸುತ್ತೆ. ಪಂಚಮಸಾಲಿ ಲಿಂಗಾಯತರಿಗೆ 2ಎ ಮೀಸಲಾತಿ ನೀಡಬೇಕೆಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳ (Jaya Mruthyunjaya Swamiji) ನೇತೃತ್ವದಲ್ಲಿ ಸಮುದಾಯದವರು ಬಹಳ ದಿನಗಳಿಂದ ಹೋರಾಟ ನಡೆಸುತ್ತಿದ್ದರು. ಚುನಾವಣೆ ತೀರ ಹತ್ತಿರಕ್ಕೆ ಬಂದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೀಸಲಾತಿ ಘೋಷಿಸಿಬಿಟ್ಟರು. ಇವತ್ತು ಪಕ್ಷದ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪರನ್ನು (BS Yediyurappa) ಕಾಣಲು ಕೆಲ ಮಠಾಧೀಶರು ನಾಯಕರ ಕಾವೇರಿ ನಿವಾಸಕ್ಕೆ ಬಂದಿದ್ದರು. ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷರೂ ಆಗಿರುವ ಯಡಿಯೂರಪ್ಪನವರ ಪುತ್ರ ಬಿವೈ ವಿಜಯೇಂದ್ರ (BY Vijayendra) ಸ್ವಾಮಿಗಳನ್ನು ಕಾರಿನಲ್ಲಿ ಕೂರಿಸಿಕೊಂಡು ಸುತ್ತು ಹಾಕಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ