ಕಲಬುರಗಿ: ಕಂಡಕ್ಟರ್ ಹುದ್ದೆಗೆ ಅವಶ್ಯಕತೆಗಿಂತ ಕಡಿಮೆ ತೂಕವಿದ್ದ ಅಭ್ಯರ್ಥಿಗಳು ಏನೆಲ್ಲ ಮಾಡಿದ್ದಾರೆ ಅಂತ ನೋಡಿ!

ಅರುಣ್​ ಕುಮಾರ್​ ಬೆಳ್ಳಿ

Updated on: Feb 10, 2023 | 12:23 PM

ಒಬ್ಬ ತನ್ನ ತೊಡೆಗಳಿಗೆ ಕಬ್ಬಿಣದ ತುಂಡುಗಳನ್ನು ಕಟ್ಟಿಕೊಂಡು ಬಂದಿದ್ದರೆ ಇನ್ನೊಬ್ಬ 5 ಕೆಜಿ ತೂಕದ ಕಲ್ಲನ್ನು ಎಲ್ಲಿ ಬಚ್ಟಿಟ್ಟುಕೊಂಡಿದ್ದಾನೆ ಅಂತ ನೋಡಿ. ಅವನಿಗೆ ದೇಹದಲ್ಲಿ ಬೇರ್ಯಾವುದೇ ಜಾಗ ಸಿಗಲಿಲ್ಲವೇ!?

ಕಲಬುರಗಿ: ವಿಡಿಯೋ ನೋಡುತ್ತಿದ್ದರೆ ನೇಮಕಾತಿಗೆ ಸಂಬಂಧಿಸಿದ ಜಾಸ್ತಿ ಅವ್ಯವಹಾರಗಳು ಕಲಬುರಗಿಯಲ್ಲಿ ನಡೆಯುತ್ತವೆಯೇ ಎಂಬ ಸಂಶಯ ಹುಟ್ಟುತ್ತದೆ. ಪಿಎಸ್ ಐ ನೇಮಕಾತಿ ಹಗರಣ ಬಯಲಾಗಿದ್ದು ಇದೇ ನಗರದಲ್ಲಿ. ಈಗ ಕಂಡಕ್ಟರ್ (conductor) ಹುದ್ದೆಗೆ ನಡೆಯತ್ತಿರುವ ದೇಹದಾರ್ಢ್ಯ ಪರೀಕ್ಷೆಯಲ್ಲಿ (physical fitness) ಹುದ್ದೆಗೆ ಅವಶ್ಯಕತೆಯಿರುವ ತೂಕಕ್ಕಿಂತ ಕಡಿಮೆ ಇರುವ ಅಭ್ಯರ್ಥಿಗಳು ಮಾಪನಯಂತ್ರದಲ್ಲಿ ಅದು ಹೆಚ್ಚಾಗಿ ಕಾಣಲು ಏನು ಮಾಡಿದ್ದಾರೆ ಅಂತ ಗಮನಿಸಿ. ಒಬ್ಬ ತನ್ನ ತೊಡೆಗಳಿಗೆ ಕಬ್ಬಿಣದ ತುಂಡುಗಳನ್ನು ಕಟ್ಟಿಕೊಂಡು ಬಂದಿದ್ದರೆ ಇನ್ನೊಬ್ಬ 5 ಕೆಜಿ ತೂಕದ ಕಲ್ಲನ್ನು ಎಲ್ಲಿ ಬಚ್ಟಿಟ್ಟುಕೊಂಡಿದ್ದಾನೆ ಅಂತ ನೋಡಿ. ಅವನಿಗೆ ದೇಹದಲ್ಲಿ ಬೇರ್ಯಾವುದೇ ಜಾಗ ಸಿಗಲಿಲ್ಲವೇ!? ಆದರೆ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ (KKRTC) ಅಧಿಕಾರಿಗಳು ಅವರ ಕಳ್ಳಾಟವನ್ನು ಬಯಲು ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 10, 2023 12:23 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.