Cauvery Theerthodbhava: ತಲಕಾವೇರಿಯಲ್ಲಿ ತೀರ್ಥೋದ್ಭವದ ಇತಿಹಾಸ ಗೊತ್ತೇ? ಇಲ್ಲಿದೆ ಮಾಹಿತಿ

Updated By: Ganapathi Sharma

Updated on: Oct 17, 2025 | 12:02 PM

ಕೊಡಗಿನ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ಶ್ರೀಮಂತ ಇತಿಹಾಸವಿದೆ. ಅಗಸ್ತ್ಯ ಮುನಿಗಳ ಕಮಂಡಲದಿಂದ ಗಣೇಶನಿಂದಾಗಿ ಜಲರೂಪಿಣಿಯಾಗಿ ಹೊರಹೊಮ್ಮಿದ ಕಾವೇರಿ ದೇವಿಯ ಪೌರಾಣಿಕ ಕಥೆ ಇದು. ಪ್ರತಿ ವರ್ಷವೂ ಭಕ್ತರಿಗೆ ದರ್ಶನ ನೀಡುವ ಪವಿತ್ರ ನದಿಯ ಮೂಲ ಹಾಗೂ ಆಚರಣೆಗಳನ್ನು ಗುರುರಾಜ್ ಆಚಾರ್ ವಿವರಿಸಿದ್ದಾರೆ.

ಮಡಿಕೇರಿ, ಅಕ್ಟೋಬರ್ 17: ಕೊಡಗಿನ ತಲಕಾವೇರಿ ಕ್ಷೇತ್ರದ ಕಾವೇರಿ ತೀರ್ಥೋದ್ಭವಕ್ಕೆ ವಿಶಿಷ್ಟ ಇತಿಹಾಸವಿದೆ. ಈ ಬಗ್ಗೆ ದೇಗುಲದ ಅರ್ಚಕ ಗುರುರಾಜ್ ಆಚಾರ್ ವಿವರಣೆ ನೀಡಿದ್ದಾರೆ. ಕಾವೇರಿ ಪುರಾಣದಲ್ಲಿ ಈ ಸ್ಥಳಕ್ಕೆ ವಿಶಿಷ್ಟ ಸ್ಥಾನವಿದೆ. ಅಗಸ್ತ್ಯ ಮುನಿಗಳು ತಮ್ಮ ಪತ್ನಿ ಲೋಪಾಮುದ್ರೆಯನ್ನು (ಕಾವೇರಿ) ಜಲರೂಪಿಣಿಯಾಗಿ ಕಮಂಡಲದಲ್ಲಿ ಇರಿಸಿಕೊಂಡಿದ್ದರು. ಒಂದು ದಿನ, ಗಣಪತಿ ದೇವರು ಕಾಗೆಯ ರೂಪದಲ್ಲಿ ಬಂದು ಕಮಂಡಲವನ್ನು ಉರುಳಿಸಿದರು. ಇದರಿಂದ ಕುಂಡಿಕೆ ಅಥವಾ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ಉಗಮವಾಯಿತು ಎಂದು ಅವರು ವಿವರಿಸಿದ್ದಾರೆ. ಈ ಪವಿತ್ರ ನದಿಯು ನಾಗತೀರ್ಥದಿಂದ ಹೊರಬಂದು ಭಾಗಮಂಡಲ ಮತ್ತು ತ್ರಿವೇಣಿ ಸಂಗಮದ ಕಡೆಗೆ ಹರಿಯುತ್ತದೆ. ಕಾವೇರಿ ದೇವಿಯು ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವುದಾಗಿ ಭರವಸೆ ನೀಡಿದ್ದಾಳೆ. ತೀರ್ಥೋದ್ಭವದ ದಿನದಂದು ವಿಶೇಷ ಪೂಜಾ ವಿಧಿವಿಧಾನಗಳು ನಡೆಯುತ್ತವೆ. ಇವುಗಳಲ್ಲಿ ಬೆಳಗಿನ ಉಷಾಪೂಜೆ, ಮಧ್ಯಾಹ್ನ ಪೂಜೆ, ಕಲ್ಪೋಕ್ತ ಪೂಜೆ, ಸಹಸ್ರನಾಮಾರ್ಚನೆ ಮತ್ತು ಕುಂಕುಮಾರ್ಚನೆ ಸೇರಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ