ದಿತ್ವಾ ಚಂಡಮಾರುತ ಪ್ರಭಾವ: ಕೊಡಗು ಜಿಲ್ಲೆಯ ಹಲವೆಡೆ ಭಾರಿ ಮಳೆ
Kodagu Rains Video: ಮಡಿಕೇರಿ ನಗರ ಸೇರಿದಂತೆ ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ದಿತ್ವಾ ಚಂಡಮಾರುತದ ಪ್ರಭಾವದಿಂದ ಭಾರಿ ಮಳೆಯಾಗಿದೆ. ಜಿಲ್ಲಾ ಆಡಳಿತ ಮಳೆ ಸಂಬಂಧಿತ ಎಚ್ಚರಿಕೆ ನೀಡಿದ್ದು, ಜನರು ಜಾಗ್ರತೆಯಿಂದ ಇರಬೇಕೆಂದು ಸೂಚಿಸಿದೆ. ಕೊಡಗಿನಲ್ಲಿ ಸುರಿದ ಮಳೆಯ ವಿಡಿಯೋ ಇಲ್ಲಿದೆ ನೋಡಿ.
- Gopal AS
- Updated on: Dec 4, 2025
- 8:25 am
ನಾಪತ್ತೆಯಾಗಿದ್ದ ಮಗುವನ್ನು ಹುಡುಕಿಕೊಟ್ಟ ಶ್ವಾನ, ಪೋಷಕರು ಫುಲ್ ಖುಷ್
ನಾಪತ್ತೆಯಾಗಿದ್ದ 2 ವರ್ಷದ ಮಗುವನ್ನು ಶ್ವಾನ ಹುಡುಕಿಕೊಟ್ಟಿರುವ ಘಟನೆ ಕೊಡಗಿನ (Kodagu) ಬಿ.ಶೆಟ್ಟಿಗೇರಿ ಬಳಿಯ ಕೊಂಗಣ ಗ್ರಾಮದಲ್ಲಿ ನಡೆದಿದೆ. ಕಾಫಿ ಕೊಯ್ಲು ಹಿನ್ನೆಲೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕೊಂಗಣ ಗ್ರಾಮದಲ್ಲಿ ಕಾರ್ಮಿಕ ದಂಪತಿ ಸುನಿಲ್ ಮತ್ತು ನಾಗಿಣಿ ತಮ್ಮ ಇಬ್ಬರು ಮಕ್ಕಳನ್ನು ಜೊತೆಯೇ ಕರೆದೊಯ್ದಿದ್ದರು. ಕಾಫಿ ತೋಟದಲ್ಲಿ ಕೆಲಸ ನಿರತರಾಗಿದ್ದ ಅವರು ಸಂಜೆ ವೇಳೆ ಗಮನಿಸಿದಾಗ ಇಬ್ಬರು ಮಕ್ಕಳ ಪೈಕಿ 2 ವರ್ಷದ ಮಗು ಸುಕನ್ಯಾ ನಾಪತ್ತೆಯಾಗಿರೋದು ಗೊತ್ತಾಗಿದೆ. ಮಗಳಿಗಾಗಿ ಒಂದಿಷ್ಟು ಹುಡುಕಾಡಿದ್ದಾರೆ. ಅದರೆ ಮಗು ಪತ್ತೆಯಾದ ಕಾರಣ ವಿಷಯವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮುಟ್ಟಿಸಿದ್ದಾರೆ. ತಕ್ಷಣ ಅವರೂ ಕೂಡ ಸ್ಥಳಕ್ಕೆ ಬಂದಿದ್ದು, ಸುಕನ್ಯಾಗಾಗಿ ಕಾಫಿ ತೋಟದ ತುಂಬ ಜಾಲಾಡಿದ್ದಾರೆ. ಆದರೆ, ಮಧ್ಯರಾತ್ರಿವರೆಗೆ ಹುಡುಕಿದರೂ ಮಗು ಪತ್ತೆಯಾಗಿರಲಿಲ್ಲ.
- Gopal AS
- Updated on: Dec 1, 2025
- 7:32 pm
Kodagu: ಕಾಫಿ ತೋಟದಲ್ಲಿ ಮಗು ನಾಪತ್ತೆ; 2 ವರ್ಷದ ಕಂದಮ್ಮನನ್ನು ಹುಡುಕಿದ್ದು ಶ್ವಾನ!
ಕಾಫಿ ಕೊಯ್ಲು ಕೆಲಸಕ್ಕೆ ಹೋಗುವ ಕಾರ್ಮಿಕ ದಂಪತಿ ತಮ್ಮ ಇಬ್ಬರು ಮಕ್ಕಳನ್ನೂ ಕರೆದೊಯ್ದಿದ್ದರು. ಮಕ್ಕಳೂ ಕಾಫಿ ತೋಟದಲ್ಲಿ ಆಟ ಆಡಿಕೊಂಡು ಖುಷಿಯಾಗಿದ್ದರು. ಆದರೆ ಸಂಜೆ ವೇಳೆ ಕೆಲಸ ಮುಗಿಸಿ ಹೊರಡುವಾಗ ಮಕ್ಕಳಿಬ್ಬರ ಪೈಕಿ 2 ವರ್ಷದ ಹೆನ್ಣು ಮಗು ನಾಪತ್ತೆಯಾಗಿರೋದು ಪೋಷಕರಿಗೆ ಗೊತ್ತಾಗಿದೆ. ಕೂಡಲೇ ಅವರು ಪೂರ್ತಿ ಕಾಫಿ ತೋಟ ಹುಡುಕಾಡಿದ್ದಾರೆ. ಅರಣ್ಯ ಇಲಾಖೆಯವರೂ ಸ್ಥಳಕ್ಕೆ ಬಂದು ಜಾಲಾಡಿದ್ದಾರೆ. ಆದರೆ ಮಗುವನ್ನು ಹುಡುಕಿದ್ದು ಮಾತ್ರ ನೀಯತ್ತಿಗೆ ಹೆಸರಾದ ಪ್ರಾಣಿ.
- Gopal AS
- Updated on: Dec 1, 2025
- 3:10 pm
ಕೊಡಗಿನಲ್ಲೊಂದು ಭಯಾನಕ ಘಟನೆ: ಪತ್ನಿಗೆ ವಿಡಿಯೋ ಕರೆ ಮಾಡಿ ನೇಣು ಬಿಗಿದುಕೊಂಡು ಸತ್ತ ಪತಿ
ಪತ್ನಿಗೆ ವಿಡಿಯೋ ಕಾಲ್ ಮಾಡಿ ಪತಿ ಲೈವ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವಂತಹ ಅತ್ಯಂತ ದಾರುಣ, ಭಯಾನಕ ಘಟನೆಯೊಂದು ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ ಸಿಂಕೋನ ಎಂಬಲ್ಲಿ ನಡೆದಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
- Gopal AS
- Updated on: Nov 16, 2025
- 10:37 pm
ಭುಜನೋವೆಂದು ಕ್ಲಿನಿಕ್ಗೆ ಹೋದಾತ ಹೆಣವಾದ: ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದನಾ ಯುವಕ?
ಕೊಡಗಿನ ಸುಂಟಿಕೊಪ್ಪದಲ್ಲಿ ಭುಜ ನೋವಿಗೆ ಚಿಕಿತ್ಸೆ ಪಡೆದ ವಿನೋದ್ ಎಂಬ ಯುವಕ ಎರಡು ಇಂಜೆಕ್ಷನ್ಗಳ ನಂತರ ಮೃತಪಟ್ಟಿದ್ದಾನೆ. ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದು, ಖಾಗಿ ಕ್ಲಿನಿಕ್ ವೈದ್ಯ ಯಶೋಧರ್ ಪೂಜಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ.
- Gopal AS
- Updated on: Nov 7, 2025
- 9:24 am
Cauvery Theerthodbhava: ತಲಕಾವೇರಿಯಲ್ಲಿ ತೀರ್ಥೋದ್ಭವದ ಇತಿಹಾಸ ಗೊತ್ತೇ? ಇಲ್ಲಿದೆ ಮಾಹಿತಿ
ಕೊಡಗಿನ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ಶ್ರೀಮಂತ ಇತಿಹಾಸವಿದೆ. ಅಗಸ್ತ್ಯ ಮುನಿಗಳ ಕಮಂಡಲದಿಂದ ಗಣೇಶನಿಂದಾಗಿ ಜಲರೂಪಿಣಿಯಾಗಿ ಹೊರಹೊಮ್ಮಿದ ಕಾವೇರಿ ದೇವಿಯ ಪೌರಾಣಿಕ ಕಥೆ ಇದು. ಪ್ರತಿ ವರ್ಷವೂ ಭಕ್ತರಿಗೆ ದರ್ಶನ ನೀಡುವ ಪವಿತ್ರ ನದಿಯ ಮೂಲ ಹಾಗೂ ಆಚರಣೆಗಳನ್ನು ಗುರುರಾಜ್ ಆಚಾರ್ ವಿವರಿಸಿದ್ದಾರೆ.
- Gopal AS
- Updated on: Oct 17, 2025
- 12:02 pm
ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ: ಹರಿದು ಬಂದ ಭಕ್ತ ಸಾಗರ
ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಸಲ್ಲುವ ಮಕರ ಲಗ್ನದಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡಲಿರುವ ಕಾವೇರಿ ತಾಯಿಯ ದರ್ಶನ ಪಡೆಯಲು ತಲಕಾವೇರಿಯತ್ತ ಭಕ್ತ ಸಾಗರವೇ ಹರಿದು ಬರ್ತಿದೆ. ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ತೀರ್ಥೋದ್ಭವದ ವೀಕ್ಷಣೆಯ ವೇಳೆ ನೂಕು ನುಗ್ಗಲು ಉಂಟಾಗದಂತೆ ಎಲ್ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿದೆ.
- Gopal AS
- Updated on: Oct 17, 2025
- 11:30 am
ನೆಟ್ವರ್ಕ್ ಆಯ್ತು ಈಗ ಜಾತಿ ಗಣತಿದಾರರಿಗೆ ಕಾಡು ಪ್ರಾಣಿಗಳ ಕಾಟ? ಶಿಕ್ಷಕರು ಕಂಡುಕೊಂಡ ಪರಿಹಾರವೇನು ಗೊತ್ತಾ?
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭಗೊಂಡ ಮೊದಲ ದಿನದಿಂದಲೇ ಹಲವು ಸಮಸ್ಯೆಗಳ ಗುಡಾಗಿತ್ತು. ಕೆಲವೆಡೆ ಇನ್ನು ನೆಟ್ವರ್ಕ್ ಸಮಸ್ಯೆವಿರುವುದು ಕಂಡುಬರುತ್ತಿದೆ. ಈ ಮಧ್ಯೆ ಕೊಡಗು ಜಿಲ್ಲೆಯಲ್ಲಿ ಸಮೀಕ್ಷೆಗೆ ತೆರಳುವ ಶಿಕ್ಷಕರಿಗೆ ಪ್ರಾಣಿಗಳ ಕಾಟ ದೊಡ್ಡ ತಲೆನೋವಾಗಿದೆ. ಈ ಸಮಸ್ಯೆಗೆ ಶಿಕ್ಷಕರು ಕಂಡುಕೊಂಡ ಪರಿಹಾರವೇನು ಗೊತ್ತಾ?
- Gopal AS
- Updated on: Oct 14, 2025
- 4:08 pm
ಮಡಿಕೇರಿ ವಸತಿ ಶಾಲೆಯಲ್ಲಿ ಅಗ್ನಿದುರಂತ ಕೇಸ್ಗೆ ಟ್ವಿಸ್ಟ್: ಅನುಮತಿ ಇಲ್ಲದೆ ವಿದ್ಯಾರ್ಥಿಗಳಿಗೆ ವಸತಿ
ಮಡಿಕೇರಿಯ ಕಾಟಿಕೇರಿ ಗ್ರಾಮದ ವಸತಿ ಶಾಲೆಯಲ್ಲಿ ನಡೆದಿದ್ದ ಅಗ್ನಿ ದುರಂತ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ದೆಹಲಿ ಮೂಲದ ಉದ್ಯಮಿ ನಡೆಸುತ್ತಿದ್ದ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ವಸತಿಗೆ ಸಂಬಂಧಿಸಿ ಅನುಮತಿಯನ್ನೇ ಪಡೆದಿರಲಿಲ್ಲ.ಪುರಾತನ ಮನೆಯಲ್ಲಿ ನಡೆಸಲಾಗುತ್ತಿದ್ದ ಈ ವಸತಿ ಶಾಲೆಯಲ್ಲಿ ಸಾಮರ್ಥ್ಯಕ್ಕೂ ಅಧಿಕ ವಿದ್ಯಾರ್ಥಿಗಳನ್ನ ದಾಖಲಿಸಿಕೊಳ್ಳಲಾಗಿತ್ತು ಎನ್ನಲಾಗಿದೆ.
- Gopal AS
- Updated on: Oct 10, 2025
- 1:48 pm
ಮಡಿಕೇರಿ ವಸತಿ ಶಾಲೆಯಲ್ಲಿ ಅಗ್ನಿ ದುರಂತ: ಓರ್ವ ಸಾವು, 51 ಮಕ್ಕಳನ್ನ ರಕ್ಷಿಸಿದ್ದು ಇವರಿಬ್ಬರು
ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕಾಟಿಕೇರಿ ವಸತಿ ಶಾಲೆಯಲ್ಲಿ ನಡೆದ ಅಗ್ನಿ ದುರಂತದಲ್ಲಿ ಓರ್ವ ಬಾಲಕ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಇಬ್ಬರು ಬಾಲಕರ ಸಮಯಪ್ರಜ್ಞೆಯಿಂದ 51 ಮಕ್ಕಳ ಜೀವ ಉಳಿದಿದೆ. ಶಾರ್ಟ್ ಸರ್ಕ್ಯೂಟ್ನಿಂದ ದುರಂತ ಸಂಭವಿಸಿರುವುದಾಗಿ ಶಂಕಿಸಲಾಗಿದೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
- Gopal AS
- Updated on: Oct 9, 2025
- 5:14 pm
ಕೂರ್ಗ್ ವಿಲೇಜ್ನತ್ತ ಮುಖಮಾಡುತ್ತಿಲ್ಲ ಪ್ರವಾಸಿಗರು! ಕೋಟ್ಯಂತರ ರೂ. ಯೋಜನೆ ವ್ಯರ್ಥ
ಕೊಡಗು ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸಲೆಂದೇ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಕೊಡಗಿನ ಪದ್ಧತಿ, ಆಚಾರ-ವಿಚಾರ, ಅಡುಗೆ, ಸಂಸ್ಕೃತಿ ಸಾರಲು ‘ಕೂರ್ಗ್ ವಿಲೇಜ್’ ಎಂಬ ಪರಿಕಲ್ಪನೆಯನ್ನು ಹಟ್ಟುಹಾಕಿ ಅದಕ್ಕೆ ಕೋಟ್ಯಂತರ ರೂ ಹೂಡಿಕೆ ಕೂಡ ಮಾಡಲಾಗಿತ್ತು. ಆದರೆ ಈ ಕೇಂದ್ರದತ್ತ ಪ್ರವಾಸಿಗರು ಮುಖ ಮಾಡುತ್ತಿಲ್ಲ.
- Gopal AS
- Updated on: Oct 8, 2025
- 3:04 pm
ಧರ್ಮಸ್ಥಳ ಕೇಸ್: ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಅಸಲಿ ಸತ್ಯ ಬಿಚ್ಚಿಟ್ಟ ಅಯ್ಯಪ್ಪನ ಪುತ್ರ
ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಎಸ್ಐಟಿ ಪಡೆಗೆ 7 ಕಳೇಬರಗಳು ದೊರಕಿವೆ. ಸೌಜನ್ಯ ಮಾವ ವಿಠ್ಠಲಗೌಡರ ಮಾಹಿತಿಯಡಿ ಎಸ್ಐಟಿ ಪಡೆ ತನಿಖೆ ನಡೆಸ್ತಿದ್ದು, ಎರಡು ದಿನದಲ್ಲಿ ಏಳು ಅಸ್ಥಿ ಪಂಜರವನ್ನ ಸಂಗ್ರಹಿಸಿದ್ದಾರೆ. ಹಾಗೇ ದೊರಕಿರುವ ವಾಕಿಂಗ್ ಸ್ಟಿಕ್ ಹಾಗೂ ಐಡಿ ಕಾರ್ಡ್, 7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಕೊಡಗಿನ ಪೊನ್ನಂಪೇಟೆ ಬಳಿಯ ಶೆಟ್ಟಿಗೇರಿಯ ಯು.ಬಿ.ಅಯ್ಯಪ್ಪನ್ನದ್ದು ಅನ್ನೋದು ಗೊತ್ತಾಗಿದೆ. ಇನ್ನು ಅಯ್ಯಪ್ಪ ಮಗ ಜೀವನ್ ಟಿವಿ9 ಜೊತೆ ಮಾತನಾಡಿದ್ದು, ಬಂಗ್ಲೆಗುಡ್ಡದಲ್ಲಿ ಸಿಕ್ಕ ವಾಕಿಂಗ್ ಸ್ಟಿಕ್ ನಮ್ಮ ತಂದೆಯವರದ್ದೇ ಎಂದು ಒಪ್ಪಿಕೊಂಡಿದ್ದಾರೆ.
- Gopal AS
- Updated on: Sep 18, 2025
- 7:39 pm