ಬೆಂಗಳೂರು: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ (Govind Babu Pujari) ರೂ. 5 ಕೋಟಿ ವಂಚಿಸಿದ ಅರೋಪ ಎದುರಿಸುತ್ತಿರುವ ಚೈತ್ರಾ ಕುಂದಾಪುರಳ (Chaitra Kundapura) ವಿಚಾರಣೆ ಇಂದು ಮುಂದುವರಿಯಲಿದೆ. ವಿಡಿಯೋದಲ್ಲಿ ಕಾಣುತ್ತಿರುವ ಹಾಗೆ ನಗರದ ಮಹಿಳಾ ಸಾಂತ್ವನ ಕೇಂದ್ರವೊಂದರಿಂದ ಅವಳನ್ನು ನಗರದ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ (CCB Office) ಕರೆತರಲಾಯಿತು. ಕಚೇರಿಗೆ ಬಂದಾಗ ಚೈತ್ರಾ ಮೊದಲಿನ ಹಾಗೆ ಮಾಧ್ಯಮದವರ ಕಡೆ ನೋಡುತ್ತಾ ಪಾಸಿಂಗ್ ಹೇಳಿಕೆ ನೀಡುವ ಸಾಹಸವೇನೂ ಮಾಡಲಿಲ್ಲ. ನಿನ್ನೆ ಮಧ್ಯಾಹ್ನ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಚೈತ್ರಾಳನ್ನು ನಗರದ ಮಹಿಳಾ ಸಾಂತ್ವನ ಕೇಂದ್ರವೊಂದಕ್ಕೆ ಕರೆದೊಯ್ಯಲಾಗಿತ್ತು. ನಿಮಗೆ ಚೆನ್ನಾಗಿ ನೆನಪಿದೆ, ಕಳೆದ ಶುಕ್ರವಾರ ಸಿಸಿಬಿ ವಿಚಾರಣೆ ಸಂದರ್ಭದಲ್ಲಿ ಅಸ್ವಸ್ಥಗೊಂಡವಳಂತೆ ನಟಿಸಿದ ಚೈತ್ರಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಎಲ್ಲ ಪ್ಯಾರಾಮೀಟರ್ಸ್ ನಾರ್ಮಲ್ ಆಗಿ ಕೆಲಸ ಮಾಡುತ್ತಿವೆ ಎಂದು ವೈದ್ಯರು ಹೇಳಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:38 am, Tue, 19 September 23