ನಂಜುಂಡೇಶ್ವರನ ರಥೋತ್ಸವದಲ್ಲಿ ಮುರಿದ ರಥದ ಚಕ್ರ ಆತಂಕದಲ್ಲಿ ಭಕ್ತ ಸಮೂಹ ಅಂತೂ ಇಂತೂ ಕೊರೊನಾ ಆತಂಕ ರಥದ ಚಕ್ರ ಮುರಿದ ಆತಂಕದ ನಡುವೆ ಇತಿಹಾಸ ಪ್ರಸಿದ್ದ ನಂಜನಗೂಡು ಜಾತ್ರೆ ಮುಕ್ತಾಯವಾಗಿದೆ. ಜಿಲ್ಲಾಡಳಿತ ಪೊಲೀಸರು ರಥೋತ್ಸವ ಯಶಸ್ವಿಯಾಗಿದಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟರೆ, ವಿಘ್ನದೊಂದಿಗೆ ಜಾತ್ರೆ ನಡೆದಿದಕ್ಕೆ ಭಕ್ತರು ಆತಂಕಕ್ಕೆ ಒಳಗಾಗಿದ್ದಾರೆ.