ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅಂತ್ಯಸಂಸ್ಕಾರ; ನೇರ ದೃಶ್ಯಾವಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Edited By:

Updated on: Jul 06, 2022 | 3:15 PM

ಗುರೂಜಿ ಮೃತದೇಹ ಸುಳ್ಳಾಗೆ ಬರುತ್ತಿದ್ದಂತೆ ಅಣ್ಣನ ಮಗ ಸಂತೋಷ್ ಅಂಗಡಿಯಿಂದ ಪಾದಪೂಜೆ ನೆರವೇರುತ್ತದೆ. ಮಹಾಮಂಗಳಾರತಿ, ಪಷ್ಪಾರ್ಚನೆ ಮಾಡಿ ಅಂತಿಮ ವಿಧಾನ ಮುಗಿಸುತ್ತಾರೆ.

ಹುಬ್ಬಳ್ಳಿ (Hubli) ಖಾಸಗಿ ಹೋಟೆಲ್​ನಲ್ಲಿ ನಿನ್ನೆ (ಜುಲೈ 5) ಚಂದ್ರಶೇಖರ್ ಗುರೂಜಿಯ (Chandrashekhar Guruji) ಭೀಕರ ಹತ್ಯೆ ನಡೆದಿದೆ. ಗುರೂಜಿಗೆ ಸುಮಾರು 40 ಬಾರಿ ಚಾಕುವಿನಿಂದ ಇರಿದು ಹಂತಕರು ಘೋರವಾಗಿ ಕೊಲೆ ಮಾಡಿದ್ದಾರೆ. ಇಂದು ಹುಬ್ಬಳ್ಳಿಯ ಸುಳ್ಳಾ ರಸ್ತೆಯ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯುತ್ತಿದೆ. ಹನ್ನೊಂದು ಜನ ಸ್ವಾಮೀಜಿಗಳಿಂದ ಪೂಜೆ ನಡೆಯಲಿದೆ. ಗುರೂಜಿ ಮೃತದೇಹ ಸುಳ್ಳಾಗೆ ಬರುತ್ತಿದ್ದಂತೆ ಅಣ್ಣನ ಮಗ ಸಂತೋಷ್ ಅಂಗಡಿಯಿಂದ ಪಾದಪೂಜೆ ನೆರವೇರುತ್ತದೆ. ಮಹಾಮಂಗಳಾರತಿ, ಪಷ್ಪಾರ್ಚನೆ ಮಾಡಿ ಅಂತಿಮ ವಿಧಾನ ಮುಗಿಸುತ್ತಾರೆ. ಈ ಎಲ್ಲಾ ನೇರ ದೃಶ್ಯಾವಳಿಗಾಗಿ ವಿಡಿಯೋ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: ಮನೆ ದೇವರು ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬೊಮ್ಮಾಯಿ ಸಭೆ: 26 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಚಿಂತನೆ

Follow Us
Web contact

TV9 Kannada

Read More