Assembly Session: ಸಿದ್ದರಾಮಯ್ಯ ಗಂಭೀರ ಮುಖಭಾವದೊಂದಿಗೆ ವಿಧಾನ ಸಭೆ ಪ್ರವೇಶಿಸಿದರೆ ವಿಜಯೇಂದ್ರ ಮಾಧ್ಯಮದವರಿಗೆ ವಿಶ್ ಮಾಡಿ ಒಳನಡೆದರು
ಮೊದಲ ಬಾರಿಗೆ ಶಾಸಕರಾಗಿರುವ ವಿಜಯೇಂದ್ರ ಮಾಧ್ಯಮದವರ ಕಡೆ ನೋಡಿ ಮುಗಳ್ನಕ್ಕು ಕೈಯೆತ್ತಿ ವಿಶ್ ಮಾಡುತ್ತಾರೆ.
ಬೆಂಗಳೂರು: ನೋಡಿ ಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇರೋದೇ ಹೀಗೆ. ಹೌದು ಮಾರಾಯ್ರೇ, ಸಿದ್ದರಾಮಯ್ಯ ಯಾವಾಗಲೂ ಗಂಭೀರ ಮುಖಭಾವದೊಂದಿಗೆ ವಿಧಾನ ಸೌಧಕ್ಕೆ ಆಗಮಿಸುತ್ತಾರೆ. ವಿರೋಧ ಪಕ್ಷದ ನಾಯಕರಾಗಿದ್ದಲೂ ಅವರು ಇದೇ ಮುಖಮುದ್ರೆಯೊಂದಿಗೆ ಅಧಿವೇಶನಗಳಲ್ಲಿ ಭಾಗವಹಿಸಲು ಆಗಮಿಸುತ್ತಿದ್ದರು. ಹೊರಗಡೆ ಕಾಯುವ ಮಾಧ್ಯಮದವರ ಕಡೆ ನೋಡಿ ಮುಗುಳ್ನಗುವುದು ಅಥವಾ ಕೈ ಬೀಸುವುದನ್ನು ವಿರಳ ಸಂದರ್ಭಗಳಲ್ಲಿ ಮಾತ್ರ ಮಾಡುತ್ತಾರೆ. ಅವರ ಸುತ್ತಮುತ್ತ ಬಹಳಷ್ಟು ಜನ ಇರುತ್ತಾರೆ. ಭದ್ರತಾ ಸಿಬ್ಬಂದಿ, ಕಚೇರಿ ಸಿಬ್ಬಂದಿ ಮತ್ತು ಆಪ್ತ ಸಹಾಯಕರ ಜೊತೆ ಸದನ ಪ್ರವೇಶಿಸಲು ಪಾಸ್ ಪಡೆದವರು ಸಹ ನಡೆದು ಬರುತ್ತಾರೆ. ಅವರ ಉದ್ದೇಶ ಮಾಧ್ಯಮಗಳ ಕೆಮೆರಾ ಫ್ರೇಮ್ ಗಳಲ್ಲಿ ಬರಬೇಕು. ಸಿದ್ದರಾಮಯ್ಯ ಹಿಂದೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಪುತ್ರ ಬಿವೈ ವಿಜಯೇಂದ್ರ (BY Vijayendra) ಸಹ ನಡೆದು ಬಂದು ವಿಧಾನ ಸೌಧದೊಳಗೆ ಹೋಗುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ಮೊದಲ ಬಾರಿಗೆ ಶಾಸಕರಾಗಿರುವ ವಿಜಯೇಂದ್ರ ಮಾಧ್ಯಮದವರ ಕಡೆ ನೋಡಿ ಮುಗಳ್ನಕ್ಕು ಕೈಯೆತ್ತಿ ವಿಶ್ ಮಾಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
