ಅತಿಥಿಗಳನ್ನು ಸ್ವಾಗತಿಸಿದ ಎಂಬಿ ಪಾಟೀಲ್, ಶಿವಕುಮಾರ್ರನ್ನು ಡೈನಾಮಿಕ್ ಲೀಡರ್ ಅಂದಾಗ ಸಿದ್ದರಾಮಯ್ಯ ಮುಖ ನೋಡಿದ್ದು ಯಾಕೋ?
ತಮ್ಮ ಇಂಗ್ಲಿಷ್ ಭಾಷಣದಲ್ಲಿ ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸ್ವಾಗತ ಅಂದಾಗ ಮುಖ್ಯಮಂತ್ರಿ ಕೈಜೋಡಿಸಿ ಸಭಿಕರಿಗೆ ನಮಸ್ಕರಿಸುತ್ತಾರೆ.
ಬೆಂಗಳೂರು: ನಗರದಲ್ಲಿಂದು ಸಿಎಸ್ ಆರ್ ಶಿಕ್ಷಣ ಸಮಾವೇಶ-2023 (CSR Education Conclave-2023) ಅಯೋಜನೆಗೊಂಡಿತು. ಕಾರ್ಪೋರೇಶನ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಕಾರ್ಯಕ್ರಮವನ್ನು ಆಯೋಜಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಚುರುಕಿನಿಂದ ಓಡಾಡಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಗೃಹ ಸಚಿವ ಜಿ ಪರಮೇಶ್ವರ್, ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ್ ಪಾಟೀಲ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್ (MB Patil) ಹಾಗೂ ಇನ್ನೂ ಕೆಲ ಗಣ್ಯರು ಭಾಗವಹಿಸಿದ್ದರು. ಅತಿಥಿಗಳನ್ನು ಸ್ವಾಗತಿಸುವ ಜವಾಬ್ದಾರಿ ಎಂಬಿ ಪಾಟೀಲ್ ಗೆ ವಹಿಸಲಾಗಿತ್ತು. ತಮ್ಮ ಇಂಗ್ಲಿಷ್ ಭಾಷಣದಲ್ಲಿ ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸ್ವಾಗತ ಅಂದಾಗ ಮುಖ್ಯಮಂತ್ರಿ ಕೈಜೋಡಿಸಿ ಸಭಿಕರಿಗೆ ನಮಸ್ಕರಿಸುತ್ತಾರೆ. ಶಿವಕುಮಾರ್ ಹೆಸರು ಹೆಸರು ಹೇಳಿ ಸ್ವಾಗತಿಸುವಾಗ ಪಾಟೀಲ್, ಡೈನಮಿಕ್ ಲೀಡರ್ (dynamic leader) ಎಂಬ ನಾಮ ವಿಶೇಷಣ ಸೇರಿಸಿದರು. ಅವರು ಹಾಗೆ ಹೇಳಿದ ಕೂಡಲೇ ಸಿದ್ದರಾಮಯ್ಯ ತಮ್ಮ ಆಪ್ತನ ಕಡೆ ತಿರುಗಿ ಮುಖ ನೋಡಿದರು!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗುಜರಾತ್ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ

‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್

5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್

ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
