Loading video

ವೇದಿಕೆ ಮೇಲಿದ್ದ ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಣರನ್ನು ಸಿಎಂ ಸಿದ್ದರಾಮಯ್ಯ ಗದರಿದ್ದು ಯಾಕೆ ಗೊತ್ತಾ?

|

Updated on: Mar 27, 2024 | 6:32 PM

ಕಾರ್ಯಕರ್ತರು ಯಾವುದೇ ಬಗೆಯ ಭಿನ್ನಮತ, ಅಸಮಾಧಾನ ಇಟ್ಟಕೊಳ್ಳದೆ ಒಗ್ಗಟ್ಟಿನಿಂದ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು. ಕೃಷ್ಣರಾಜ ಕ್ಷೇತ್ರದಲ್ಲಿ ಹೆಚ್ಚು ಬಡವರಿದ್ದಾರೆ, ತಮ್ಮ ಸರ್ಕಾರ ಬಡವರನ್ನು ಅವರ ಧರ್ಮ, ಜಾತಿ, ರಾಜಕೀಯ ಪಕ್ಷದೆಡೆಗಿನ ಒಲವು-ಮೊದಲಾದ ಯಾವ ಅಂಶವನ್ನೂ ಗಣನೆಗೆ ತೆಗೆದುಕೊಳ್ಳದೆ ನೆರವಾಗುವ ಪ್ರಯತ್ನ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮೈಸೂರು: ನಗರದಲ್ಲಿಂದು ಚಾಮರಾಜ, ನರಸಿಂಹರಾಜ, ಕೃಷ್ಣರಾಜ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕೃಷ್ಣರಾಜ ಕ್ಷೇತ್ರದಲ್ಲಿ (Krishnaraja Assembly segment) ಪ್ರಮಖ ಬಿಜೆಪಿ ಮುಖಂಡರೆನಿಸಿಕೊಂಡಿದ್ದ ರಾಜೀವ ಅವರು ತಮ್ಮ ಅನೇ ಸ್ನೇಹಿತರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ನಿಸ್ಸಂದೇಹವಾಗಿ ಬಹುಮತ ಸಿಗಲಿದೆ ಎಂದು ಹೇಳಿದರು. ಮುಖ್ಯಮಂತ್ರಿ ಅವರು ವೇದಿಕೆ ಮೇಲಿದ್ದ ಲಕ್ಷ್ಮಣರನ್ನು (M Laxman) ಕಾರ್ಯಕರ್ತರಿಗೆ ಪರಿಚಯ ಮಾಡಿಸುವಾಗ ಅವರು ಪ್ರಾಯಶಃ ಬೇರೆಯವರ ಜೊತೆ ಮಾತಾಡುತ್ತಿದ್ದರು. ಇದರಿಂದ ಸ್ವಲ್ಪ ಸಹನೆ ಕಳೆದುಕೊಂಡಂತೆ ಕಂಡ ಸಿದ್ದರಾಮಯ್ಯ ‘ಏಯ್ ಲಕ್ಷ್ಮಣ’ ಅಂತ ಗದರಿದರು!

ಲಕ್ಷ್ಮಣ ಮುಖ್ಯಮಂತ್ರಿಯವರ ಕಡೆ ನೋಡಿದಾಗ ಕಾರ್ಯಕರ್ತರಿಗೆ ನಮಸ್ಕಾರ ಮಾಡು ಅನ್ನುವಂತೆ ಸನ್ನೆಯಲ್ಲೇ ಸೂಚಿಸಿದರು. ಕಾರ್ಯಕರ್ತರು ಯಾವುದೇ ಬಗೆಯ ಭಿನ್ನಮತ, ಅಸಮಾಧಾನ ಇಟ್ಟಕೊಳ್ಳದೆ ಒಗ್ಗಟ್ಟಿನಿಂದ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು. ಕೃಷ್ಣರಾಜ ಕ್ಷೇತ್ರದಲ್ಲಿ ಹೆಚ್ಚು ಬಡವರಿದ್ದಾರೆ, ತಮ್ಮ ಸರ್ಕಾರ ಬಡವರನ್ನು ಅವರ ಧರ್ಮ, ಜಾತಿ, ರಾಜಕೀಯ ಪಕ್ಷದೆಡೆಗಿನ ಒಲವು-ಮೊದಲಾದ ಯಾವ ಅಂಶವನ್ನೂ ಗಣನೆಗೆ ತೆಗೆದುಕೊಳ್ಳದೆ ನೆರವಾಗುವ ಪ್ರಯತ್ನ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:ತವರು ಜಿಲ್ಲೆಯಲ್ಲಿ ಮೂರು ದಿನ ಸಿದ್ದರಾಮಯ್ಯ ಠಿಕಾಣಿ; ಮೈಸೂರು, ಚಾಮರಾಜನಗರ ಗೆಲ್ಲಲು ಮಾಸ್ಟರ್ ಪ್ಲಾನ್