ವಾಜಪೇಯಿ ಕಾಲು ಹಿಡಿದು ಯತ್ನಾಳ್​ ಸಚಿವರಾಗಿರಬೇಕು: ಕಾಂಗ್ರೆಸ್​ ಶಾಸಕ ಪ್ರದೀಪ್​ ಈಶ್ವರ್​

Updated on: Oct 14, 2025 | 1:01 PM

ಬಿಜೆಪಿ ನಾಯಕರ ವಿರುದ್ಧ ಚಿಕ್ಕಬಳ್ಳಾಪುರ ಕಾಂಗ್ರೆಸ್​ ಶಾಸಕ ಪ್ರದೀಪ್​ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ. ವಾಜಪೇಯಿ ಅವರ ಕಾಲು ಹಿಡಿದು ಯತ್ನಾಳ್​ ಸಚಿವರಾಗಿರಬೇಕು ಎಂದು ಆರೋಪಿಸಿರುವ ಅವರು, ಸಚಿವ ಪ್ರಿಯಾಂಕ್​ ಖರ್ಗೆ ಅವರಿಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಸಿ.ಟಿ.ರವಿ ಆಹ್ವಾನ ಕೊಟ್ಟಿದ್ದಾರೆ. ಮೊದಲು ನನ್ನ ಜೊತೆ ನೀವು ಬಹಿರಂಗ ಚರ್ಚೆ ಗೆಲ್ಲಿ. ಆ ಮೇಲೆ ಖರ್ಗೆಯವರ ಬಳಿ ನಾನೇ ಕರೆದುಕೊಂಡು ಹೋಗ್ತೀನಿ ಎಂದು ಪ್ರದೀಪ್​ ಸವಾಲು ಹಾಕಿದ್ದಾರೆ.

ಬೆಂಗಳೂರು, ಅಕ್ಟೋಬರ್​ 14: ವಾಜಪೇಯಿ ಅವರ ಕಾಲು ಹಿಡಿದು ಯತ್ನಾಳ್​ (Yatnal) ಸಚಿವರಾಗಿರಬೇಕು. ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗಿಲ್ಲ. ನಿಮ್ಮದು ಡ್ರಾಮಾ ಕಂಪನಿ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್​ ಶಾಸಕ ಪ್ರದೀಪ್​ ಈಶ್ವರ್​ ಹೇಳಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ವಿಪಕ್ಷ ನಾಯಕ ಆರ್​. ಅಶೋಕ್​, ಪರಿಷತ್​ ಸದಸ್ಯ ಸಿ.ಟಿ. ರವಿ ಹೇಳಿಕೆಗೂ ಕೌಂಟರ್​ ಕೊಟ್ಟಿದ್ದಾರೆ. ಸಚಿವ ಪ್ರಿಯಾಂಕ್​ ಖರ್ಗೆ ಅವರಿಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಸಿ.ಟಿ.ರವಿ ಆಹ್ವಾನ ಕೊಟ್ಟಿದ್ದಾರೆ. ಮೊದಲು ನನ್ನ ಜೊತೆ ನೀವು ಬಹಿರಂಗ ಚರ್ಚೆ ಗೆಲ್ಲಿ. ಆ ಮೇಲೆ ಖರ್ಗೆಯವರ ಬಳಿ ನಾನೇ ಕರೆದುಕೊಂಡು ಹೋಗ್ತೀನಿ ಎಂದು ಪ್ರದೀಪ್​ ಸವಾಲು ಹಾಕಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published on: Oct 14, 2025 12:54 PM