My India My Life Goals: ಸಂತಾನವಿಲ್ಲದ ಕೊರಗನ್ನು ಸಸಿನೆಟ್ಟು ಫೋಷಿಸಿ ನೀಗಿಸಿಕೊಂಡ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಕನ್ನಡಿಗರ ಹೆಮ್ಮೆ!

ತಮ್ಮ ನಿಸ್ವಾರ್ಥ ಕಾಯಕದ ಮೂಲಕ ನಾಡಿನ ಸಮಸ್ತ ಕನ್ನಡಿಗರಿಗೆ ಪ್ರೇರಣೆಯಾಗಿರುವ ಸಾಲುಮರದ ತಿಮ್ಮಕ್ಕರನ್ನು ವೃಕ್ಷಮಾತೆ ಅಂತ ಕರೆಯುವುದು ಅತ್ಯಂತ ಸೂಕ್ತವೆನಿಸುತ್ತದೆ.

My India My Life Goals: ಸಂತಾನವಿಲ್ಲದ ಕೊರಗನ್ನು ಸಸಿನೆಟ್ಟು ಫೋಷಿಸಿ ನೀಗಿಸಿಕೊಂಡ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಕನ್ನಡಿಗರ ಹೆಮ್ಮೆ!
|

Updated on: Jul 21, 2023 | 5:11 PM

ಬೆಂಗಳೂರು: ಸಾಲುಮರದ ತಿಮ್ಮಕ್ಕನ (Salumarada Timmakka) ಪರಿಚಯ ಯಾರಿಗಿಲ್ಲ. ಕನ್ನಡನಾಡಿನ ಹೆಮ್ಮೆಯ ಪರಿಸರವಾದಿ (environmentalist) ಮತ್ತು ವೃಕ್ಷಮಾತೆ ಅವರು. ನಮ್ಮ ಪರಿಸರಕ್ಕೆ ಅವರು ನೀಡಿರುವ ಕೊಡುಗೆ ಅಪಾರ ಮತ್ತು ಅನನ್ಯ. ಅವರಿಗೀಗ 112 ರ ಪ್ರಾಯ ಮತ್ತು ಅವರೇ ಹೇಳುವಂತೆ ಕಳೆದ 65 ವರ್ಷಗಳಿಂದ ಸಸಿಗಳನ್ನು ನೆಟ್ಟು ಅವು ಮರವಾಗುವುದನ್ನು ನೋಡುತ್ತಿದ್ದಾರೆ. ಇದುವರೆಗೆ 8,000 ಕ್ಕೂ ಅಧಿಕ ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸಿದ್ದಾರೆ. ಪರಿಸರದ ಉಳಿವಿಗೆ ಅವರ ನೀಡಿರುವ ಮಹತ್ತರ ಕೊಡುಗೆಯನ್ನು ಗೌರವಿಸಿ ಭಾರತ ಸರ್ಕಾರ 2019ರಲ್ಲಿ ಅವರಿಗೆ ಪದ್ಮಶ್ರೀ (Padma Shri) ಪ್ರಶಸ್ತಿಯಿಂದ ಪುರಸ್ಕರಿಸಿದೆ. ಈ ಇಳಿವಯಸ್ಸಿನಲ್ಲೂ ಅವರು ಸಸಿಗಳನ್ಮು ನೆಡುತ್ತಾರೆ. ಪತಿ ಚಿಕ್ಕರಂಗಯ್ಯ ಕೂಡ ಸಸಿನೆಡುವಲ್ಲಿ ತಿಮ್ಮಕ್ಕನಿಗೆ ನೆರವಾಗುತ್ತಿದ್ದರು. ದಂಪತಿಗೆ ಸಂತಾನ ಭಾಗ್ಯವಿರಲಿಲ್ಲ. ಆ ಕೊರತೆ, ದುಃಖ ಮತ್ತು ನೋವನ್ನು ಸಸಿ ನೆಟ್ಟು ಪೋಷಿಸುವ ಮೂಲಕ ನೀಗಿಸಿಕೊಳ್ಳುತ್ತಿದ್ದರು. ತಮ್ಮ ನಿಸ್ವಾರ್ಥ ಕಾಯಕದ ಮೂಲಕ ನಾಡಿನ ಸಮಸ್ತ ಕನ್ನಡಿಗರಿಗೆ ಪ್ರೇರಣೆಯಾಗಿರುವ ಸಾಲುಮರದ ತಿಮ್ಮಕ್ಕರನ್ನು ವೃಕ್ಷಮಾತೆ ಅಂತ ಕರೆಯುವುದು ಅತ್ಯಂತ ಸೂಕ್ತವೆನಿಸುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow us
ಚಾಮುಂಡಿ ಪ್ರಾಧಿಕಾರ ಜಟಾಪಟಿ: ಪ್ರಮೋದದೇವಿ ಸುದ್ದಿಗೋಷ್ಠಿ ನೇರಪ್ರಸಾರ
ಚಾಮುಂಡಿ ಪ್ರಾಧಿಕಾರ ಜಟಾಪಟಿ: ಪ್ರಮೋದದೇವಿ ಸುದ್ದಿಗೋಷ್ಠಿ ನೇರಪ್ರಸಾರ
ನಮಗೆ ರೈತರ ಹಿತಾಸಕ್ತಿ ಮುಖ್ಯವೇ ಹೊರತು ರಾಜಕಾರಣವಲ್ಲಳ ಬಿವೈ ವಿಜಯೇಂದ್ರ
ನಮಗೆ ರೈತರ ಹಿತಾಸಕ್ತಿ ಮುಖ್ಯವೇ ಹೊರತು ರಾಜಕಾರಣವಲ್ಲಳ ಬಿವೈ ವಿಜಯೇಂದ್ರ
ತುಂಗಭದ್ರಾ ಡ್ಯಾಂನ ಹೊಸ ಗೇಟ್​ ನಿರ್ಮಾಣದ ಎಕ್ಸ್​ಕ್ಲೂಸಿವ್​ ದೃಶ್ಯ!
ತುಂಗಭದ್ರಾ ಡ್ಯಾಂನ ಹೊಸ ಗೇಟ್​ ನಿರ್ಮಾಣದ ಎಕ್ಸ್​ಕ್ಲೂಸಿವ್​ ದೃಶ್ಯ!
ಬಿಜೆಪಿ ಜೊತೆ ಮೈತ್ರಿ ಬೆಳೆಸಲು ಕುಮಾರಸ್ವಾಮಿಗೆ ಹೇಳಿದ್ದೇ ನಾನು: ಯೋಗೇಶ್ವರ್
ಬಿಜೆಪಿ ಜೊತೆ ಮೈತ್ರಿ ಬೆಳೆಸಲು ಕುಮಾರಸ್ವಾಮಿಗೆ ಹೇಳಿದ್ದೇ ನಾನು: ಯೋಗೇಶ್ವರ್
ಪರಸ್ಪರ ಕೆಸರೆರಚಾಟ ನಿಲ್ಲಿಸಲೊಲ್ಲದ ಶಿವಕುಮಾರ್ ಮತ್ತು ಕುಮಾರಸ್ವಾಮಿ!
ಪರಸ್ಪರ ಕೆಸರೆರಚಾಟ ನಿಲ್ಲಿಸಲೊಲ್ಲದ ಶಿವಕುಮಾರ್ ಮತ್ತು ಕುಮಾರಸ್ವಾಮಿ!
ತಡವಾಗಿ ಕೆಡಿಪಿ ಸಭೆಗೆ ಬಂದ ಅಧಿಕಾರಿಗೆ ಇದೇನು ಗೋಪಾಲಪ್ಪನ ಛತ್ರನಾ ಎಂದ ಸಚಿವ
ತಡವಾಗಿ ಕೆಡಿಪಿ ಸಭೆಗೆ ಬಂದ ಅಧಿಕಾರಿಗೆ ಇದೇನು ಗೋಪಾಲಪ್ಪನ ಛತ್ರನಾ ಎಂದ ಸಚಿವ
ಹುಕ್ಕುಂದ ಜಲಪಾತ ವೀಕ್ಷಿಸಲು ಹೋದ ಯುವಕ ಯುವತಿಯರಿಂದ ಅಪಾಯದೊಂದಿಗೆ ಸರಸ
ಹುಕ್ಕುಂದ ಜಲಪಾತ ವೀಕ್ಷಿಸಲು ಹೋದ ಯುವಕ ಯುವತಿಯರಿಂದ ಅಪಾಯದೊಂದಿಗೆ ಸರಸ
ಹುವೈ ಪರಿಚಯಿಸಿದೆ ಆಕರ್ಷಕ ವಿನ್ಯಾಸದ ಸೂಪರ್ ಸ್ಮಾರ್ಟ್​​ವಾಚ್
ಹುವೈ ಪರಿಚಯಿಸಿದೆ ಆಕರ್ಷಕ ವಿನ್ಯಾಸದ ಸೂಪರ್ ಸ್ಮಾರ್ಟ್​​ವಾಚ್
ದ್ವೀಪದಂತಾದ ಆನೇಕಲ್​ನ ಕಮ್ಮಸಂದ್ರ, ಜನಕ್ಕೆ ಮನೆಯಿಂದ ಹೊರಬರಲಾಗದ ಸ್ಥಿತಿ
ದ್ವೀಪದಂತಾದ ಆನೇಕಲ್​ನ ಕಮ್ಮಸಂದ್ರ, ಜನಕ್ಕೆ ಮನೆಯಿಂದ ಹೊರಬರಲಾಗದ ಸ್ಥಿತಿ
ಪೂರನ್ ಪವರ್: ಬರೋಬ್ಬರಿ 113 ಮೀಟರ್ ಸಿಕ್ಸ್ ಸಿಡಿಸಿದ ನಿಕ್ಕಿ
ಪೂರನ್ ಪವರ್: ಬರೋಬ್ಬರಿ 113 ಮೀಟರ್ ಸಿಕ್ಸ್ ಸಿಡಿಸಿದ ನಿಕ್ಕಿ