ಕೊವಿಡ್ ಸೆಂಟರ್​ನಿಂದ ಸೋಂಕಿತ ಎಸ್ಕೇಪ್​.. ಹಿಡಿಯಲು ಹೋದ ಮಾರ್ಷಲ್​ಗಳಿಗೆ accident

[lazy-load-videos-and-sticky-control id=”IJ6HTS6ljws”] ಬೆಂಗಳೂರು: BIEC ಕೊವಿಡ್ ಸೆಂಟರ್​ನಿಂದ ಪರಾರಿಯಾದ ಸೋಂಕಿತನನ್ನ BBMP ಮಾರ್ಷಲ್​ಗಳು ಹಿಡಿಯಲು ಹೋದ ವೇಳೆ ಅಪಘಾತ ಸಂಭವಿಸಿರುವ ಘಟನೆ ನಡೆದಿದೆ. ಮಾದಾವರ ಬಳಿ ಇರುವ BIEC ಕೋವಿಡ್​ ಸೆಂಟರ್​ನಿಂದ ಸೋಂಕಿತನೊಬ್ಬ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಇದೇ ವೇಳೆ ಅಲ್ಲೇ ಭದ್ರತೆಗೆಂದು ನಿಯೋಜನೆಗೊಂಡಿದ್ದ ಬಿಬಿಎಂಪಿ ಮಾರ್ಷಲ್​ಗಳು ಮತ್ತೊಂದು ಕಾರಿನಲ್ಲಿ ಆತನನ್ನು ಹಿಡಿಯಲು ಹಿಂಬಾಲಿಸಿದ್ದಾರೆ. ಈ ವೇಳೆ ಮಾರ್ಷಲ್​ಗಳಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ […]

ಕೊವಿಡ್ ಸೆಂಟರ್​ನಿಂದ ಸೋಂಕಿತ ಎಸ್ಕೇಪ್​.. ಹಿಡಿಯಲು ಹೋದ ಮಾರ್ಷಲ್​ಗಳಿಗೆ accident
ಸಾಧು ಶ್ರೀನಾಥ್​

Updated on: Aug 17, 2020 | 10:36 AM

[lazy-load-videos-and-sticky-control id=”IJ6HTS6ljws”]

ಬೆಂಗಳೂರು: BIEC ಕೊವಿಡ್ ಸೆಂಟರ್​ನಿಂದ ಪರಾರಿಯಾದ ಸೋಂಕಿತನನ್ನ BBMP ಮಾರ್ಷಲ್​ಗಳು ಹಿಡಿಯಲು ಹೋದ ವೇಳೆ ಅಪಘಾತ ಸಂಭವಿಸಿರುವ ಘಟನೆ ನಡೆದಿದೆ.

ಮಾದಾವರ ಬಳಿ ಇರುವ BIEC ಕೋವಿಡ್​ ಸೆಂಟರ್​ನಿಂದ ಸೋಂಕಿತನೊಬ್ಬ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಇದೇ ವೇಳೆ ಅಲ್ಲೇ ಭದ್ರತೆಗೆಂದು ನಿಯೋಜನೆಗೊಂಡಿದ್ದ ಬಿಬಿಎಂಪಿ ಮಾರ್ಷಲ್​ಗಳು ಮತ್ತೊಂದು ಕಾರಿನಲ್ಲಿ ಆತನನ್ನು ಹಿಡಿಯಲು ಹಿಂಬಾಲಿಸಿದ್ದಾರೆ.

ಈ ವೇಳೆ ಮಾರ್ಷಲ್​ಗಳಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ಮೂವರು ಮಾರ್ಷಲ್​ಗಳ ಪೈಕಿ ಒಬ್ಬರಿಗೆ ಗಾಯಗಳಾಗಿದೆ. ಉಳಿದವರು ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪರಾರಿಯಾಗಿರುವ ಸೋಂಕಿತನನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.

Published On - 4:56 pm, Sun, 16 August 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us