ಪ್ರತಿಷ್ಠಿತ ಡಾ. ರಾಜ್ 6 ನೇ ಅವೃತ್ತಿಗೆ ಕೌಂಟ್ ಡೌನ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಂಡಗಳಿಗೆ ಕಿಟ್ ವಿತರಿಸಿದ ಅರವಿಂದ ಲಿಂಬಾವಳಿ

ಸಾಧು ಶ್ರೀನಾಥ್​

Updated on: Nov 20, 2023 | 12:42 PM

ಬೆಂಗಳೂರು, ನವೆಂಬರ್ 20: ಪ್ರತಿಷ್ಠಿತ ಡಾ. ರಾಜ್ 6 ನೇ ಅವೃತ್ತಿ ಕ್ರಿಕೆಟ್​​​ಗಾಗಿ ( Dr. Raj Cricket 6th edition) ಕೌಂಟ್ ಡೌನ್ ಹಿನ್ನೆಲೆಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ತಂಡಗಳಿಗೆ ಕರ್ನಾಟಕ ಸರ್ಕಾರ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಅವರು ಕ್ರಿಕೆಟ್ ಕಿಟ್ ಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ವಿತರಿಸಿದರು.

ಬೆಂಗಳೂರು, ನವೆಂಬರ್ 20: ಪ್ರತಿಷ್ಠಿತ ಡಾ. ರಾಜ್ 6 ನೇ ಅವೃತ್ತಿ ಕ್ರಿಕೆಟ್​​​ಗಾಗಿ ( Dr. Raj Cricket 6th edition) ಕೌಂಟ್ ಡೌನ್ ಹಿನ್ನೆಲೆಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ತಂಡಗಳಿಗೆ ಕರ್ನಾಟಕ ಸರ್ಕಾರ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ (Former Minister Aravinda Limbavali) ಅವರು ಕ್ರಿಕೆಟ್ ಕಿಟ್ ಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ವಿತರಿಸಿದರು. ಈ ಸಂದರ್ಭದಲ್ಲಿ ELV ಲಯನ್ಸ್, GLR ಮಯೂರ ರಾಯಲ್ಸ್, ರುಚಿರ ರೇಂಜರ್ಸ್ ತಂಡಗಳ ಸೆಲೆಬ್ರಿಟಿ ನಾಯಕರು, ಆಟಗಾರರಿಗೆ ಕ್ರಿಕೆಟ್ ಕಿಟ್ ಗಳನ್ನು ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ GLR ತಂಡದ ಮಾಲೀಕರಾದ ಎಲ್. ರಾಜೇಶ್, ELV ಲಯನ್ಸ್ ಮಾಲೀಕರಾದ ಭಾಸ್ಕರ್, ನಟರಾದ ಡಾರ್ಲಿಂಗ್ ಕೃಷ್ಣ, ಧರ್ಮ ಕೀರ್ತಿ ರಾಜ್, ಅರುಣ್ ಬಚ್ಚನ್, ನಿರ್ದೇಶಕ ಪವನ್ ಒಡೆಯರ್ ಮತ್ತಿತರರು ಭಾಗವಹಿಸಿದ್ದರು. ವಿಶೇಷವಾಗಿ ಈ ಬಾರಿಯ ಡಾ ರಾಜ್ ಕಪ್ ನಾಲ್ಕು ದೇಶಗಳಲ್ಲಿ(ಸಿಂಗಾಪುರ್, ಮಸ್ಕಟ್, ಶ್ರೀಲಂಕಾ, ಮಲೇಶಿಯ) ನಡೆಯಲಿದ್ದು ಸ್ಯಾಂಡ್ ವುಡ್ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹರಡಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು