ಪ್ರಧಾನಿ ಮೋದಿಗೆ ಚನ್ನಪಟ್ಟಣದ ಗೊಂಬೆ ಉಡುಗೊರೆ ನೀಡಿದ ಸಿಪಿ ಯೋಗೇಶ್ವರ
ಪ್ರಧಾನಿ ನರೇಂದ್ರ ಮೋದಿಯವರು ಇಂದು (ಏ.30) ಗೊಂಬೆಗಳ ನಾಡು ಚನ್ನಪಟ್ಟಣಕ್ಕೆ ಭೇಟಿ ನೀಡಿದರು. ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಸಿ ಪಿ ಯೋಗೇಶ್ವರ ಅವರ ಪರ ಮತಾಯಾಚಿಸಿದರು.
ರಾಮನಗರ: ಪ್ರಧಾನಿ ನರೇಂದ್ರ ಮೋದಿಯವರು ಇಂದು (ಏ.30) ಗೊಂಬೆಗಳ ನಾಡು ಚನ್ನಪಟ್ಟಣಕ್ಕೆ ಭೇಟಿ ನೀಡಿದರು. ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಸಿ ಪಿ ಯೋಗೇಶ್ವರ ಅವರ ಪರ ಮತಾಯಾಚಿಸಿದರು. ಈ ಸಮಾವೇಶದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ಮಾಡಿದರು. ಇನ್ನು ಪ್ರಧಾನಿ ಮೋದಿಯವರು ದೇಶದ ಯಾವುದೇ ಪ್ರದೇಕ್ಕೆ ಹೋದರು ಸ್ಥಳಿಯ ವಿಶೇಷತೆಗಳು ಉಡುಗೊರೆ ರೂಪದಲ್ಲಿ ದೊರೆಯುತ್ತವೆ. ಮತ್ತು ಪ್ರಧಾನಿ ಮೋದಿಯವರು ಈ ಹಿಂದೆ ಮನ್ ಕೀ ಬಾತ್ನಲ್ಲಿ ಚನ್ನಪಟ್ಟಣದ ಗೊಂಬೆಗಳ ಬಗ್ಗೆ ಉಲ್ಲೇಖಿಸಿದ್ದರು. ಈಗ ಪ್ರಧಾನಿ ಮೋದಿಯವರಿಗೆಚನ್ನಪಟ್ಟಣದ ಗೊಂಬೆಯನ್ನು ಅಭ್ಯರ್ಥಿ ಸಿಪಿ ಯೋಗೇಶ್ವರ ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಈ ಉಡುಗೊರೆ ಬಹಳ ವಿಶೇಷತೆಯಿಂದ ಕೂಡಿದೆ. ಆಲೆ ಮರದಿಂದ ಮಾಡಿರುವ ಒಂದುವರೆಯಿಂದ ಎರಡು ಅಡಿ ಉದ್ದದ ಆಂಜನೇಯನ ಮೂರ್ತಿಯನ್ನು ನೀಡಿದ್ದಾರೆ.
Published on: Apr 30, 2023 03:14 PM
Latest Videos
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

