AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chikmagalur: ಹುಟ್ಟೂರು ದೊಡ್ಡಮಾಗರವಳ್ಳಿ ಸುಗ್ಗಿ ಹಬ್ಬದ ಆಚರಣೆಯಲ್ಲಿ ದೇವರ ಅಡ್ಡೆ ತಲೆಮೇಲೆ ಹೊತ್ತು ಭಕ್ತಿಪರವಶರಾಗಿ ಕುಣಿದ ಸಿಟಿ ರವಿ

Chikmagalur: ಹುಟ್ಟೂರು ದೊಡ್ಡಮಾಗರವಳ್ಳಿ ಸುಗ್ಗಿ ಹಬ್ಬದ ಆಚರಣೆಯಲ್ಲಿ ದೇವರ ಅಡ್ಡೆ ತಲೆಮೇಲೆ ಹೊತ್ತು ಭಕ್ತಿಪರವಶರಾಗಿ ಕುಣಿದ ಸಿಟಿ ರವಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 06, 2023 | 11:09 AM

Share

ದೊಡ್ಡಮಾಗರವಳ್ಳಿಯಲ್ಲಿ 12 ದಿನಗಳ ಕಾಲ ನಡೆಯುವ ಉತ್ಸವದ ಕೊನೆಯ ದಿನ ಸುಗ್ಗಿ ಹಬ್ಬ ಆಚರಿಸಲಾಗುತ್ತದೆ.

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ (CT Ravi) ತಮ್ಮ ಹುಟ್ಟೂರು ಜಿಲ್ಲೆಯ ಚಿಕ್ಕಮಗಳೂರು ತಾಲ್ಲೂಕಿನ ದೊಡ್ಡಮಾಗರವಳ್ಳಿಯಲ್ಲಿ (Doddamagaravalli) ನಡೆದ ಸುಗ್ಗಿಹಬ್ಬದ (harvest festival) ಆಚರಣೆಯಲ್ಲಿ ದೇವರ ಅಡ್ಡೆ ತಲೆ ಮೇಲೆ ಹೊತ್ತು ಭಕ್ತಿಪರವಶರಾಗಿ ಕುಣಿದ ವಿಡಿಯೋ ನಮಗೆ ಲಭ್ಯವಾಗಿದೆ. ಈ ಹಿಂದೆಯೂ ರವಿಯವರು ಚಿಕ್ಕಮಗಳೂರು ಜಿಲ್ಲಾ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಯುವ ಕ್ರೀಡಾಪಟುಗಳೊಂದಿಗೆ ಕುಣಿದಿದ್ದರು. ಆದರೆ ಆ ಸಂದರ್ಭವೇ ಬೇರೆ. ದೊಡ್ಡಮಾಗರವಳ್ಳಿಯಲ್ಲಿ 12 ದಿನಗಳ ಕಾಲ ನಡೆಯುವ ಉತ್ಸವದ ಕೊನೆಯ ದಿನ ಸುಗ್ಗಿ ಹಬ್ಬ ಆಚರಿಸಲಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More