Nitya Bhakti: ಶ್ರೀಶೈಲ ದೇವಾಲಯದ ಶಿಖರ ದರ್ಶನದ ಹಿಂದಿನ ರಹಸ್ಯ ಇದುವೇ ನೋಡಿ

Updated on: Nov 01, 2024 | 7:07 AM

ಹಿಂದೂ ಧರ್ಮದಲ್ಲಿ ತೀರ್ಥಕ್ಷೇತ್ರಗಳ ಯಾತ್ರೆಗೆ ಬಹಳ ಮಹತ್ವ ಇದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಾಶಿ ಹೀಗೆ ಅನೇಕ ಕ್ಷೇತ್ರಗಳಿಗೆ ಹಿಂದುಗಳು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಅದೇ ರೀತಿ ಶ್ರೀಶೈಲ ಕ್ಷೇತ್ರವೂ ಒಂದು. ಈ ಕ್ಷೇತ್ರ ದರ್ಶನದ ಹಿಂದಿನ ರಹಸ್ಯ, ದರ್ಶನದ ವೇಳೆ ಅನುಸರಿದಬೇಕಾದ ಕ್ರಮಗಳ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ. ವಿಡಿಯೋ ನೋಡಿ.

ಶ್ರೀಶೈಲ ಕ್ಷೇತ್ರಕ್ಕೆ ಭೇಟಿ ನೀಡಿದವರು ಜಾಗರೂಕತೆಯಿಂದ, ಸರಿಯಾದ ಕ್ರಮದಿಂದ ಅಲ್ಲಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದೇ ಆದರೆ ಆ ಯಾತ್ರೆ ಬಹಳ ಸಾರ್ಥಕವಾಗಲಿದೆ ಎಂದು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ. ಶ್ರೀಶೈಲ ಕ್ಷೇತ್ರ ಭೇಟಿ ಹಾಗೂ ದರ್ಶನದ ಬಗ್ಗೆ ಇಲ್ಲಿ ಮಾತನಾಡಿರುವ ಅವರು, ಪುಣ್ಯ ಪ್ರಾಪ್ತಿ ಹಾಗೂ ಮೋಕ್ಷಕ್ಕೆ ಸಂಬಂಧಿಸಿ ವಿವರಿಸಿದ್ದಾರೆ. ಶ್ರೀಶೈಲ ಶಿಖರವನ್ನು ನೋಡಿದ್ದೇ ಆದರೆ ಪುನರ್ಜನ್ಮ ಇಲ್ಲ ಎಂಬ ನಂಬಿಕೆ ಇದೆ. ಆದರೆ, ಆ ಶ್ರೀಶೈಲ ಶಿಖರವನ್ನು ನೋಡುವುದಕ್ಕೆ ಅದರದ್ದೇ ಆದ ವಿಧಿವಿಧಾನ ಇದೆ ಎಂದಿರುವ ಗುರೂಜಿ, ಅದೇನು ಎಂಬುದನ್ನು ಇಲ್ಲಿ ವಿವರಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ವಿಡಿಯೋ ನೋಡಿ.

ಅಧ್ಯಾತ್ಮ ಸಂಬಂಧಿತ ಇನ್ನಷ್ಟು ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More