Daily Devotional: ಸೂರ್ಯ ಭಗವಾನರಿಗೆ ಅರ್ಘ್ಯ ಕೊಡುವುದರ ಮಹತ್ವವೇನು?

Updated on: Mar 22, 2026 | 7:19 AM

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಸೂರ್ಯ ಭಗವಾನರಿಗೆ ಅರ್ಘ್ಯ ಕೊಡುವುದರ ಮಹತ್ವವೇನು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಸೂರ್ಯೋದಯವು ದಿನದ ಪ್ರಾರಂಭವನ್ನು ಸೂಚಿಸುತ್ತದೆ. ನಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ಕಷ್ಟ ಮತ್ತು ಸಂಕಷ್ಟಗಳಿಗೆ ದೇವರ ಮೊರೆ ಹೋಗುವಾಗ, ಸೂರ್ಯ ಭಗವಾನ್ ಸಾಕ್ಷಾತ್ ಕಣ್ಣಿಗೆ ಕಾಣುವ ದೇವರಾಗಿದ್ದಾರೆ. ಸೂರ್ಯನು ಗ್ರಹಗಳ ರಾಜನಾಗಿ, ಇಡೀ ಭೂಮಂಡಲವನ್ನು ಬೆಳಗುವ ಶಕ್ತಿಯಾಗಿದ್ದಾನೆ. ಬೆಳಗ್ಗೆ ಎದ್ದ ತಕ್ಷಣ ಸೂರ್ಯ ನಮಸ್ಕಾರ ಮಾಡುವ ಪದ್ಧತಿ ಹಲವರಿಗೆ ಇದ್ದರೂ, ಅದಕ್ಕಿಂತಲೂ ಸರಳವಾದ ಮತ್ತು ಪರಿಣಾಮಕಾರಿ ವಿಧಾನವೆಂದರೆ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದು.

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಸೂರ್ಯ ಭಗವಾನರಿಗೆ ಅರ್ಘ್ಯ ಕೊಡುವುದರ ಮಹತ್ವವೇನು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಸೂರ್ಯೋದಯವು ದಿನದ ಪ್ರಾರಂಭವನ್ನು ಸೂಚಿಸುತ್ತದೆ. ನಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ಕಷ್ಟ ಮತ್ತು ಸಂಕಷ್ಟಗಳಿಗೆ ದೇವರ ಮೊರೆ ಹೋಗುವಾಗ, ಸೂರ್ಯ ಭಗವಾನ್ ಸಾಕ್ಷಾತ್ ಕಣ್ಣಿಗೆ ಕಾಣುವ ದೇವರಾಗಿದ್ದಾರೆ. ಸೂರ್ಯನು ಗ್ರಹಗಳ ರಾಜನಾಗಿ, ಇಡೀ ಭೂಮಂಡಲವನ್ನು ಬೆಳಗುವ ಶಕ್ತಿಯಾಗಿದ್ದಾನೆ. ಬೆಳಗ್ಗೆ ಎದ್ದ ತಕ್ಷಣ ಸೂರ್ಯ ನಮಸ್ಕಾರ ಮಾಡುವ ಪದ್ಧತಿ ಹಲವರಿಗೆ ಇದ್ದರೂ, ಅದಕ್ಕಿಂತಲೂ ಸರಳವಾದ ಮತ್ತು ಪರಿಣಾಮಕಾರಿ ವಿಧಾನವೆಂದರೆ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದು.

ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಅನಾರೋಗ್ಯದ ಸಮಸ್ಯೆಗಳು ನಿವಾರಣೆಯಾಗುತ್ತವೆ, ಹಿತಶತ್ರುಗಳ ಕಾಟ ಕಡಿಮೆಯಾಗುತ್ತದೆ ಮತ್ತು ಎಲ್ಲಾ ಕೆಲಸ ಕಾರ್ಯಗಳಲ್ಲಿ ಶುಭ ಫಲಗಳು ದೊರೆಯುತ್ತವೆ ಎಂದು ನಂಬಲಾಗಿದೆ. ಆದಿತ್ಯ ಸ್ತೋತ್ರ ಮತ್ತು ಆದಿತ್ಯ ಹೃದಯಂ ಪಠಿಸುವಂತೆಯೇ, ಅರ್ಘ್ಯ ಅರ್ಪಣೆ ಕೂಡ ಅಷ್ಟೇ ಶಕ್ತಿಯುತವಾದ ಸರಳ ತಂತ್ರವಾಗಿದೆ. ಈ ಆಚರಣೆಗೆ ಯಾವುದೇ ಅಗರ್‌ಬತ್ತಿ, ದೀಪ, ಅಲಂಕಾರ, ಹಣ್ಣುಗಳು ಅಥವಾ ನೈವೇದ್ಯದ ಅಗತ್ಯವಿರುವುದಿಲ್ಲ. ಕೇವಲ ಅರ್ಘ್ಯದ ಮೂಲಕವೇ ಎಲ್ಲಾ ಸಂಕಲ್ಪಗಳನ್ನು ಈಡೇರಿಸಿಕೊಳ್ಳುವ ಪ್ರಯತ್ನ ಮಾಡಬಹುದು ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Follow Us