ಹೊರಗಡೆ ಇದ್ದಾಗ ಸೆಲೆಬ್ರಿಟಿಯಾಗಿ ಐಷಾರಾಮಿ ಜೀವನ ನಡೆಸಿದ ದರ್ಶನ್ ಅವರು ಈಗ ಜೈಲಿಯಲ್ಲಿ ಕಷ್ಟಪಡುತ್ತಿದ್ದಾರೆ. ಪ್ರಮುಖವಾಗಿ ಜೈಲಿನ ಊಟದಿಂದ ದರ್ಶನ್ಗೆ ತೊಂದರೆ ಆಗುತ್ತಿದೆ. ಇದರಿಂದ ಅವರಿಗೆ ಆರೋಗ್ಯ ಸಮಸ್ಯೆ ಕೂಡ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಊಟ ತರಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಲಯಕ್ಕೆ ದರ್ಶನ್ ಮನವಿ ಮಾಡಿದ್ದಾರೆ. ಜೈಲು ಊಟ ಸೇವಿಸಿದ್ದರಿಂದ ದರ್ಶನ್ಗೆ ಲೂಸ್ ಮೋಷನ್ ಶುರುವಾಗಿದೆ. ದೇಹದ ತೂಕ ಕಡಿಮೆ ಆಗುತ್ತಿದೆ. ಫಿಟ್ನೆಸ್ ಕೂಡ ಹಾಳಾಗುತ್ತಿದೆ. ಮನೆ ಊಟ ಸೇವಿಸಿದರೆ ಈ ಸಮಸ್ಯೆ ಸರಿ ಆಗಬಹುದು ಎಂಬ ಕಾರಣದಿಂದ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಜೈಲಿನ ವೈದ್ಯರು ನೀಡುವ ವರದಿ ಆಧಾರದ ಮೇಲೆ ನ್ಯಾಯಾಲಯ ಮುಂದಿನ ಸೂಚನೆ ನೀಡಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.