ದರ್ಶನ್​ ಸ್ನೇಹಿತ ಪ್ರದೋಷ್​ ತಂದಿದ್ದ ವಸ್ತುಗಳ ಇಂಚಿಂಚೂ ತಪಾಸಣೆ ಮಾಡಿದ ಪೊಲೀಸ್

| Updated By: ಮದನ್​ ಕುಮಾರ್​

Updated on: Aug 29, 2024 | 4:26 PM

ಪ್ರದೋಶ್ ದಾಖಲಾತಿ ಸಮಯದಲ್ಲಿ ಹಿಂಡಲಗಾ ಜೈಲಿನ ಪೊಲೀಸರು ತೀವ್ರ ತಪಾಸಣೆ ಮಾಡಿದ್ದಾರೆ. ಪ್ರದೋಶ್ ಬ್ಯಾಗ್​ನಲ್ಲಿ ತಂದಿದ್ದ ಸಿರಪ್ ಅನ್ನು ಪೊಲೀಸರು ತಮ್ಮ ಬಳಿ ಇರಿಸಿಕೊಂಡಿದ್ದಾರೆ. ವೈದ್ಯರ ಸಲಹೆ ಪಡೆದ ಬಳಿಕ ನೀಡುವುದಾಗಿ ಹೇಳಿದ್ದಾರೆ. ಆತ ತಂದಿದ್ದ ಟೂತ್​ಪೇಸ್ಟ್ ವಾಸನೆ ನೋಡಿ ನಂತರ ವಾಪಸ್ ನೀಡಿಲಾಗಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..

ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿಗಳಲ್ಲಿ ಒಬ್ಬನಾದ ಪ್ರದೋಶ್​ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್​ ಆಗಿದ್ದಾನೆ. ಈ ಕೇಸ್​ನಲ್ಲಿ ಆತ 14ನೇ ಆರೋಪಿ ಆಗಿದ್ದಾನೆ. ಹಿಂಡಲಗಾ ಜೈಲಿನಲ್ಲಿ ಪ್ರದೋಶ್​ಗೆ ವಿಚಾರಣಾಧೀನ ಖೈದಿ ಸಂಖ್ಯೆ 2894 ನೀಡಲಾಗಿದೆ. ಬೆಂಗಳೂರಿನಿಂದ ಆತ 2 ಬ್ಯಾಗ್ ತೆಗೆದುಕೊಂಡು ಬಂದದ್ದ. ಹೆಚ್ಚು ತೂಕ ಇರುವ ಕಾರಣ ಬ್ಲಾಂಕೆಟ್ ಕೊಂಡೊಯ್ಯಲು ಪೊಲೀಸರು ನಿರಾಕರಣೆ ಮಾಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸಿರಪ್ ವಾಪಸ್​ ಕೊಡುವುದಾಗಿ ಸಿಬ್ಬಂದಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on