Kannada News Videos Darshan friend Pradosh shifted to Hindalaga Central Jail in Belagavi Entertainment News in Kannada
ದರ್ಶನ್ ಸ್ನೇಹಿತ ಪ್ರದೋಷ್ ತಂದಿದ್ದ ವಸ್ತುಗಳ ಇಂಚಿಂಚೂ ತಪಾಸಣೆ ಮಾಡಿದ ಪೊಲೀಸ್
ಪ್ರದೋಶ್ ದಾಖಲಾತಿ ಸಮಯದಲ್ಲಿ ಹಿಂಡಲಗಾ ಜೈಲಿನ ಪೊಲೀಸರು ತೀವ್ರ ತಪಾಸಣೆ ಮಾಡಿದ್ದಾರೆ. ಪ್ರದೋಶ್ ಬ್ಯಾಗ್ನಲ್ಲಿ ತಂದಿದ್ದ ಸಿರಪ್ ಅನ್ನು ಪೊಲೀಸರು ತಮ್ಮ ಬಳಿ ಇರಿಸಿಕೊಂಡಿದ್ದಾರೆ. ವೈದ್ಯರ ಸಲಹೆ ಪಡೆದ ಬಳಿಕ ನೀಡುವುದಾಗಿ ಹೇಳಿದ್ದಾರೆ. ಆತ ತಂದಿದ್ದ ಟೂತ್ಪೇಸ್ಟ್ ವಾಸನೆ ನೋಡಿ ನಂತರ ವಾಪಸ್ ನೀಡಿಲಾಗಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..
ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿಗಳಲ್ಲಿ ಒಬ್ಬನಾದ ಪ್ರದೋಶ್ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಆಗಿದ್ದಾನೆ. ಈ ಕೇಸ್ನಲ್ಲಿ ಆತ 14ನೇ ಆರೋಪಿ ಆಗಿದ್ದಾನೆ. ಹಿಂಡಲಗಾ ಜೈಲಿನಲ್ಲಿ ಪ್ರದೋಶ್ಗೆ ವಿಚಾರಣಾಧೀನ ಖೈದಿ ಸಂಖ್ಯೆ2894 ನೀಡಲಾಗಿದೆ. ಬೆಂಗಳೂರಿನಿಂದ ಆತ 2 ಬ್ಯಾಗ್ ತೆಗೆದುಕೊಂಡು ಬಂದದ್ದ. ಹೆಚ್ಚು ತೂಕ ಇರುವ ಕಾರಣ ಬ್ಲಾಂಕೆಟ್ ಕೊಂಡೊಯ್ಯಲು ಪೊಲೀಸರು ನಿರಾಕರಣೆ ಮಾಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸಿರಪ್ ವಾಪಸ್ ಕೊಡುವುದಾಗಿ ಸಿಬ್ಬಂದಿ ಹೇಳಿದ್ದಾರೆ.