‘ದರ್ಶನ್​ಗೆ ಡಯಟ್ ಬಗ್ಗೆ ಗೊತ್ತು, ಅವರು ಆರೋಗ್ಯ ಕಾಪಾಡಿಕೊಳ್ಳುತ್ತಾರೆ’; ಜಿಮ್ ರವಿ

| Updated By: ರಾಜೇಶ್ ದುಗ್ಗುಮನೆ

Updated on: Jul 27, 2024 | 3:13 PM

ನಟ ದರ್ಶನ್ ಅವರು ಅರೆಸ್ಟ್ ಆಗಿ ಜೈಲಿನಲ್ಲಿ ಇದ್ದಾರೆ. ಅವರು ಫಿಟ್ನೆಸ್​ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾ ಇದ್ದವರು. ಹೀಗಾಗಿ ಅವರು ಹೊರಗಿದ್ದಾಗ ಸರಿಯಾದ ರೀತಿಯಲ್ಲಿ ಆಹಾರ ಕ್ರಮ ಅನುಸರಿಸುತ್ತಿದ್ದರು. ಆದರೆ, ಈಗ ಜೈಲಿಗೆ ಸೇರಿರುವುದರಿಂದ ಅಲ್ಲಿ ನೀಡಿದ ಊಟವನ್ನು ಸ್ವೀಕರಿಸಬೇಕಿದೆ. ಅಂದುಕೊಂಡ ವರ್ಕೌಟ್ ಮಾಡೋಕೂ ಸಾಧ್ಯವಾಗುತ್ತಿಲ್ಲ.

ದರ್ಶನ್ ಅವರು ಈಗ ಜೈಲು ಸೇರಿದ್ದಾರೆ. ಜೈಲಿನ ಊಟ ಅವರಿಗೆ ಹೊಂದುತ್ತಿಲ್ಲ. ಈ ಕಾರಣಕ್ಕೆ ಅವರು ಸಾಕಷ್ಟು ತೂಕ ಕಳೆದುಕೊಂಡಿದ್ದಾರೆ ಎಂದು ವರದಿ ಆಗಿದೆ. ಆದರೆ, ಅವರು ಬೇಗ ರಿಕವರಿ ಹೊಂದುತ್ತಾರೆ ಅನ್ನೋದು ಜಿಮ್ ರವಿ ಅವರ ಮಾತು. ‘ಎಲ್ಲಾ ಕ್ರೀಡೇಗೂ ಬೇಕಾಗಿರೋದು ಯೋಗ. ಯಾವುದೇ ಸ್ಥಳದಲ್ಲಿ ಇದ್ದರೂ ಯೋಗ ಮಾಡಬಹುದು. ದರ್ಶನ್​ಗೆ ಯೋಗ ಗೊತ್ತು. ಅವರಿಗೆ ಡಯಟ್ ಪ್ಲ್ಯಾನ್ ಗೊತ್ತು. ಅವರದ್ದೇ ಆದ ಆಹಾರ ಪದ್ದತಿ ಇಲ್ಲದೆ ಇದ್ದಾಗ ಸ್ವಲ್ಪ ತೆಳ್ಳಗಾಗುತ್ತಾರೆ. ನಾನು ಪ್ರತಿ ವರ್ಷ 101 ದಿನ ತರಕಾರಿ ಮಾತ್ರ ಸೇವನೆ ಮಾಡುವ ಪದ್ಧತಿ ಇಟ್ಟುಕೊಂಡಿದ್ದೇನೆ. ಪ್ರತಿಯೊಬ್ಬ ಕ್ರೀಡಾಪಟುಗೂ ಅವರದ್ದೇ ಆಹಾರ ಪದ್ಧತಿ ಇರುತ್ತದೆ. ಅದನ್ನು ಗೌರವಿಸಬೇಕು. ದರ್ಶನ್ ಅವರು ಬೇಗ ರಿಕವರಿ ಆಗ್ತಾರೆ. ಇನ್ನೂ ಸ್ಮಾರ್ಟ್ ಆಗಿ ಬರುತ್ತಾರೆ. ದರ್ಶನ್ ತೂಕ ಕಳೆದುಕೊಂಡಿದ್ದರೆ ಒಂದೇ ತಿಂಗಳಲ್ಲಿ ರಿಕವರಿ ಹೊಂದುತ್ತಾರೆ’ ಎನ್ನುತ್ತಾರೆ ರವಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on