ಮೈಸೂರು: ಮೈಸೂರು ಭಾಗದ ಅರಣ್ಯಾಧಿಕಾರಿ ಡಾ ಐಬಿ ಪ್ರಭುಗೌಡ ಹೇಳುವ ಹಾಗೆ ಅನೆಗಳು ನಿಸ್ಸಂದೇಹವಾಗಿ ಭಾವುಕ ಜೀವಿಗಳು. ದಸರಾ ಮಹೋತ್ಸವಕ್ಕಾಗಿ ಎರಡು ತಿಂಗಳು ಹಿಂದೆ ಕಾಡಿನಿಂದ ಬಂದು ಮೈಸೂರಲ್ಲಿ ನೆಲೆಸಿದ್ದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳಿಗೆ ವಾಪಸ್ಸು ಕಾಡಿಗೆ ಹೋಗಲು ಕಿಂಚಿತ್ತೂ ಮನಸ್ಸಿಲ್ಲ. ಮೈಸೂರಲ್ಲಿ ದೊರೆತ ರಾಜ್ಯಾತಿಥ್ಯ ಕೂಡ ಹಾಗಿತ್ತು. ಹಾಗಾಗೇ, ಈ ಆನೆ ಹತ್ತಿದ ಲಾರಿಯನ್ನು ಇಳಿಯುತ್ತದೆ. ಮಾವುತರು ಮತ್ತು ಕಾವಾಡಿಗರು ಬಹಳ ಕಷ್ಟಪಟ್ಟು ಅದನ್ನು ಪುನಃ ಟ್ರಕ್ ಹತ್ತಿಸುತ್ತಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್; ವಿಡಿಯೋ ನೋಡಿ