ದಾವಣಗೆರೆಯಲ್ಲಿ ರೌಡಿಶೀಟರ್ ಗಳ ಮನೆ ಮೇಲೆ ದಾಳಿ ನಡೆಸಿ ಪೊಲೀಸರಿಂದ ತಪಾಸಣೆ

ಅರುಣ್​ ಕುಮಾರ್​ ಬೆಳ್ಳಿ

Updated on: May 15, 2025 | 11:18 AM

ಪೊಲೀಸ್ ಅಧಿಕಾರಿ ಮತ್ತು ರೌಡಿಶೀಟರ್ ನಡುವೆ ನಡೆಯುವ ಸ್ವಾರಸ್ಯಕರ ಸಂಭಾಷಣೆಯನ್ನು ಕೇಳಿ. ಹೊಟ್ಟೆಪಾಡಿಗೆ ಏನು ಮಾಡಿಕೊಂಡಿದ್ದೀಯ ಅಂತ ಅಧಿಕಾರಿ ಕೇಳಿದರೆ ರೌಡಿ ಕುರಿ ಕಾಯ್ತೀನಿ ಅನ್ನುತ್ತಾನೆ. ಎಷ್ಟಿವೆ ಕುರಿ ಅಂತ ಕೇಳಿದರೆ ಒಂದು ಅನ್ನುತ್ತಾನೆ. ಅವನು ಹೇಳುವ ಟಗರು ಮನೆಗಂಟಿಕೊಂಡಿರುವ ಶೆಡ್​​ನಲ್ಲಿ ಕಟ್ಟಿಹಾಕಿದ್ದು ಕಾಣಿಸುತ್ತದೆ. ನಾಯಿಗಳೂ ಅವನ ಶೆಡ್​ನಲ್ಲಿವೆ.

ದಾವಣಗೆರೆ, ಮೇ 15: ದಾವಣಗೆರೆ ನಗರದಲ್ಲಿರುವ 46 ರೌಡಿಶೀಟರ್ ಮನೆಗಳ ಮೇಲೆ ಇಂದು ಬೆಳ್ಳಂಬೆಳಗ್ಗೆಯೇ ನಗರದ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಕುಖ್ಯಾತ ರೌಡಿಯೆನಿಸಿಕೊಂಡಿರುವ ಗಾರೆ ಮಂಜನ ಮನೆಯಲ್ಲಿ ಪೊಲೀಸರು ತಪಾಸಣೆ ನಡೆಸತ್ತಿರುವುದನ್ನು ದೃಶ್ಯಗಳಲ್ಲಿ ವೀಕ್ಷಿಸಬಹುದು. ಡೆಪ್ಯೂಟಿ ಪೊಲೀಸ್ ವರಿಷ್ಠಾಧಿಕಾರಿ ಶರಣಬಸವೇಶ್ವರ ಮತ್ತು ಪೊಲೀಸ್ ಇನ್ಸ್​ಪೆಕ್ಟರ್ ರವಿನಾಯ್ಕ್ ನೇತೃತ್ವದಲ್ಲಿ ಪೊಲೀಸ್ ದಾಳಿ ನಡೆಯಿತು ಎಂದು ನಮ್ಮ ದಾವಣಗೆರೆ ವರದಿಗಾರ ಮಾಹಿತಿ ನೀಡುತ್ತಾರೆ. ಗಾರೆ ಮಂಜನ ವಿರುದ್ಧ ಕೊಲೆ ದರೋಡೆ, ಜೀವ ಬೆದರಿಕೆ ಸೇರಿದಂತೆ ಒಟ್ಟು 12 ಕೇಸ್​ಗಳಿವೆಯಂತೆ.

ಇದನ್ನೂ ಓದಿ: ದಾವಣಗೆರೆ ರೌಡಿಶೀಟರ್​ ಸಂತೋಷ್​ ​ಹತ್ಯೆ ಪ್ರಕರಣ: ಆರೋಪಿಗಳು ಪೊಲೀಸರ ಮುಂದೆ ಶರಣು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.