ಕರೇಕಟ್ಟೆ ಗ್ರಾಮದಲ್ಲಿ ಜನ ನೋಡುತ್ತಿದ್ದಂತೆ ರಸ್ತೆಯಲ್ಲಿ ಮಲಗಿದ್ದ ಶ್ವಾನಗಳ ಮೇಲೆ ಕಾರ್ ಹಾಯಿಸಿಕೊಂಡು ಹೋದ ದುಷ್ಟ, ಒಂದು ಸಾವು

| Updated By: ಸಾಧು ಶ್ರೀನಾಥ್​

Updated on: Aug 30, 2023 | 9:33 AM

ದಾವಣಗೆರೆ ಜಿಲ್ಲೆಯ ಕರೇಕಟ್ಟೆ ಗ್ರಾಮದ ಜಂಬಣ್ಣ ವೃತ್ತದ ಬಳಿ ನಿನ್ನೆ ರಾತ್ರಿ ಶ್ವಾನಗಳ ಮೇಲೆ ಅಪರಿಚಿತ ವಾಹನ ಓಡಿಸಿರುವ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ರಸ್ತೆಯಲ್ಲಿ ಮಲಗಿದ್ದ ಶ್ವಾನಗಳ ಮೇಲೆ ಕಾರ್ ಓಡಿಸಿಕೊಂಡು ಹೋಗಿದ್ದರಿಂದ ಒಂದು ಸಾವನ್ನಪ್ಪಿದೆ. ಅಮಾನವೀಯವಾಗಿ ವರ್ತಿಸಿ ಶ್ವಾನ ಸಾವಿಗೆ ಕಾರಣನಾದ ಕಾರ್ ಚಾಲಕನ ಪತ್ತೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ದಾವಣಗೆರೆ, ಆಗಸ್ಟ್​ 30: ರಾತ್ರಿ ವೇಳೆ ಗ್ರಾಮದಲ್ಲಿ ರಸ್ತೆಯಲ್ಲಿ ಮಲಗಿದ್ದ ನಾಯಿಗಳ  (Dog) ಮೇಲೆ ದುಷ್ಟನೊಬ್ಬ ಕಾರು ಹಾಯಿಸಿಕೊಂಡು ಹೋಗಿದ್ದಾನೆ. ಸದರಿ ಅಪರಿಚಿತ ಕಾರು (Car) ಮೂರು ಶ್ವಾನಗಳ‌ ಮೇಲೆ ಹಾಯ್ದುಹೋಗಿದೆ. ಒಂದು ಶ್ವಾನ ಸ್ಥಳದಲ್ಲಿಯೇ ಸಾವಿಗೀಡಾಗಿದೆ. ಇನ್ನೆರಡು ಶ್ವಾನಗಳಿಗೆ ಸ್ಥಳೀಯರಿಂದ ಚಿಕಿತ್ಸೆ ನೀಡಲಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕರೇಕಟ್ಟೆ ಗ್ರಾಮದ (Davangere Karekatte village) ಜಂಬಣ್ಣ ವೃತ್ತದ ಬಳಿ ನಿನ್ನೆ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ.

ಶ್ವಾನಗಳ ಮೇಲೆ ಅಪರಿಚಿತ ವಾಹನ ಓಡಿಸಿರುವ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಅಮಾನವೀಯವಾಗಿ ವರ್ತಿಸಿ ಶ್ವಾನ ಸಾವಿಗೆ ಕಾರಣನಾದ ಕಾರ್ ಚಾಲಕನ ಪತ್ತೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on