Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramanagara: ಕನಕಪುರದಲ್ಲಿ ಕರ್ನಾಟಕ ವನ್ ಕೇಂದ್ರಕ್ಕೆ ಭೇಟಿ ನೀಡಿ ಗೃಹ ಲಕ್ಷ್ಮಿ ಯೋಜನೆ ಅರ್ಜಿ ನೋಂದಣಿ ಪ್ರಕ್ರಿಯೆ ಪರಿಶೀಲಿಸಿದ ಡಿಕೆ ಶಿವಕುಮಾರ್

Ramanagara: ಕನಕಪುರದಲ್ಲಿ ಕರ್ನಾಟಕ ವನ್ ಕೇಂದ್ರಕ್ಕೆ ಭೇಟಿ ನೀಡಿ ಗೃಹ ಲಕ್ಷ್ಮಿ ಯೋಜನೆ ಅರ್ಜಿ ನೋಂದಣಿ ಪ್ರಕ್ರಿಯೆ ಪರಿಶೀಲಿಸಿದ ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 22, 2023 | 10:41 AM

ಖುದ್ದು ಉಪ ಮುಖ್ಯಮಂತ್ರಿಯೇ ಸರ್ಕಾರದ ಯೋಜನೆಯೊಂದರ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಖುದ್ದಾಗಿ ಅದೂ ರಜಾದಿನ ವೀಕ್ಷಿಸುವುದು ಅಭಿನಂದನಾರ್ಹ.

ರಾಮನಗರ: ಬೇರೆ ಸಚಿವರ ವಿಷಯ ಹೇಗೋ ಏನೋ ಗೊತ್ತಿಲ್ಲ ಮಾರಾಯ್ರೇ, ಆದರೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತಮ್ಮ ಜವಾಬ್ದಾರಿಗಳ ಬಗ್ಗೆ ಸೀರಿಯಸ್ ಆಗಿದ್ದಾರೆ. ಈ ವಿಡಿಯೋ ನೋಡಿದರೆ ನಿಮಗೆ ಯಾಕೆ ಅನ್ನೋದು ಗೊತ್ತಾಗುತ್ತದೆ. ಇವತ್ತು ಶನಿವಾರ ಮತ್ತು ರಜಾ ದಿನ (holiday). ಆದರೆ ಶಿವಕುಮಾರ್ ತಮ್ಮ ಕ್ಷೇತ್ರ ಕನಕಪುರದಲ್ಲಿ ಕರ್ನಾಟಕ ವನ್ ಕೇಂದ್ರವೊಂದಕ್ಕೆ ಭೇಟಿ ನೀಡಿ ಗೃಹ ಲಕ್ಷ್ಮಿ ಯೋಜನೆಗೆ (Gruha Lakshmi scheme) ನೋಂದಣಿ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಸೆಂಟರ್ ನಲ್ಲಿ ಕೂತು ಅರ್ಜಿ ನಮೂನೆಯನ್ನು ನೋಡಿ, ನನ್ನ ಮತ್ತು ಸಿದ್ದರಾಮಯ್ಯನವರ ಫೋಟೊಗಳು ಜೊತೆಯಾಗಿ ಬರ್ಬೇಕು ಕಣ್ರಯ್ಯ, ಮೇಲೆ ಕೆಳಗೆ ಮಾಡಿದ್ದೀರಲ್ಲ ಅಂತ ಅಲ್ಲಿನ ಸಿಬ್ಬಂದಿಯೊಂದಿಗೆ ಜೋಕ್ ಮಾಡಿದರು. ಖುದ್ದು ಉಪ ಮುಖ್ಯಮಂತ್ರಿಯೇ ಸರ್ಕಾರದ ಯೋಜನೆಯೊಂದರ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಖುದ್ದಾಗಿ ಅದೂ ರಜಾದಿನ ವೀಕ್ಷಿಸುವುದು ಅಭಿನಂದನಾರ್ಹ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ