ಹುಬ್ಬಳ್ಳಿ, ಸೆಪ್ಟೆಂಬರ್ 19: ಹುಬ್ಬಳ್ಳಿ ತಾಲ್ಲೂಕಿನ ಅಲ್ಲಾಪೂರ ಗ್ರಾಮದಲ್ಲಿ ಒಂದು ಅಪರೂಪದಲ್ಲೇ ಅಪರೂಪದ ಬೀಳ್ಕೊಡುಗೆ ಕಾರ್ಯಕ್ರಮ ನಡೆದಿದೆ. ಅಂದಹಾಗೆ, ಇದು ಯಾವುದೇ ಅಧಿಕಾರಿಗೋ, ನೌಕರರಿಗೋ ಮಾಡಿದ್ದಲ್ಲ. ಬದಲಾಗಿ ಸರ್ಕಾರಿ ಬಸ್ಸಿಗೆ! 15 ವರ್ಷಗಳ ಕಾಲ ಗ್ರಾಮಸ್ಥರ ಸೇವೆ ಮಾಡಿದ ಬಸ್ಗೆ ಅವಧಿ ಮುಗಿದ ಕಾರಣ ಗುಜರಿಗೆ ಕಳುಹಿಸುವುದಕ್ಕೂ ಮುನ್ನ ಕೊನೆಯ ದಿನ ಗ್ರಾಮಸ್ಥರು ವಿಶೇಷವಾಗಿ ವಿದಾಯ ಹೇಳಿದ್ದಾರೆ. ಗ್ರಾಮಕ್ಕೆ ಬಸ್ ಬರುತ್ದಿದ್ದಂತೆ ಸಂಪೂರ್ಣವಾಗಿ ಸ್ವಚ್ಛಗೊಳಿಸಿ ವಿಶೇಷವಾಗಿ ತಳಿಲು ತೋರಣಗಳಿಂದ ಅಲಂಕಾರ ಮಾಡಿದ್ದಾರೆ. ಮಧುವಣಗಿತ್ತಿಯಂತೆ ಬಸ್ ಅನ್ನು ಶೃಂಗಾರ ಮಾಡಿ ಪೂಜೆಯನ್ನೂ ಸಲ್ಲಿಸಿದ್ದಾರೆ.
2008 ರಿಂದ ಅಲ್ಲಾಪೂರ ಗ್ರಾಮ ಗ್ರಾಮಕ್ಕೆ ಸಾರಿಗೆ ಇಲಾಖೆ ಬಸ್ ಸೇವೆ ಆರಂಭಿಸಿತ್ತು. ಆ ಬಸ್ ಈವರೆಗೆ 11.80 ಲಕ್ಷ ಕಿಲೋ ಮೀಟರ್ ಸಂಚಾರ ಮಾಡಿದೆ. ಹೀಗಾಗಿ ತಮ್ಮ ಗ್ರಾಮಕ್ಕೆ ಸುಮಾರು 15-16 ವರ್ಷಗಳಿಂದ ಸಂಚಾರ ಸೌಲಭ್ಯ ನೀಡಿದ ಬಸ್ಗೆ ಜನ ಭಾವನಾತ್ಮಕ ಬೀಳ್ಕೋಡುಗೆ ನೀಡಿದ್ದಾರೆ. ಜತೆಗೆ ಸಾರಿಗೆ ಸಂಸ್ಥೆಯ ಚಾಲಕ-ನಿರ್ವಾಹಕರನ್ನು ಸನ್ಮಾನಿಸಿ ಗೌರವ ಸಲ್ಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ