ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​

|

Updated on: Sep 10, 2024 | 3:49 PM

‘ಧ್ರುವ ಸರ್ಜಾ ಅವರ ಮ್ಯಾನೇಜರ್​ ಮತ್ತು ಡ್ರೈವರ್ ಸೇರಿಕೊಂಡು ಬೇರೆ ಹುಡುಗರನ್ನು ಕರೆಸಿ ಜಿಮ್​ ಟ್ರೇನರ್​ ಮೇಲೆ ಹಲ್ಲೆ ಮಾಡಿದ್ದರು. ಆ ಕೇಸ್​ನಲ್ಲಿ 4 ಜನರ ಬಂಧನ ಆಗಿದೆ’ ಎಂದು ಬೆಂಗಳೂರು ಪೊಲೀಸ್ ಕಮಿಷನರ್​ ಬಿ. ದಯಾನಂದ ಅವರು ತಿಳಿಸಿದ್ದಾರೆ. ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ತನಿಖೆಯ ಬಳಿಕ ಇನ್ನಷ್ಟು ವಿಚಾರಗಳು ಬಹಿರಂಗ ಆಗಲಿವೆ.

ನಟ ಧ್ರುವ ಸರ್ಜಾ ಅವರ ಮ್ಯಾನೇಜರ್ ಅಶ್ವಿನ್​ ಬಂಧನ ಆಗಿರುವ ಬಗ್ಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್​ ಬಿ. ದಯಾನಂದ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಧ್ರುವ ಸರ್ಜಾ ಮ್ಯಾನೇಜರ್​ ಅಶ್ವಿನಿ ಹಾಗೂ ಇನ್ನೂ ಮೂವರನ್ನು ಬಂಧಿಸಲಾಗಿದೆ ಎಂದು ಇಂದು (ಸೆಪ್ಟೆಂಬರ್​ 10) ಅವರು ತಿಳಿಸಿದ್ದಾರೆ. ‘ಧ್ರುವ ಸರ್ಜಾಗೆ ಹತ್ತಿರ ಆಗಬೇಕು ಎಂಬ ಉದ್ದೇಶದಿಂದ ಅವರ ವೈಯಕ್ತಿಕ ಕಾರಣಕ್ಕೆ ಈ ರೀತಿ ನಡೆದಿದೆ. ಆದ್ದರಿಂದ ಬಂಧಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on