Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Polls: ಹೈಕಮಾಂಡ್ ಒಲವು ನಿಮ್ಮ ಪರ ಇದೆಯಾ ಅಂತ ಕೇಳಿದ್ದಕ್ಕೆ ಡಿಕೆ ಶಿವಕುಮಾರ್ ಹೇಗೆ ವರ್ತಿಸಿದರು ಅಂತ ನೋಡಿ!

Karnataka Assembly Polls: ಹೈಕಮಾಂಡ್ ಒಲವು ನಿಮ್ಮ ಪರ ಇದೆಯಾ ಅಂತ ಕೇಳಿದ್ದಕ್ಕೆ ಡಿಕೆ ಶಿವಕುಮಾರ್ ಹೇಗೆ ವರ್ತಿಸಿದರು ಅಂತ ನೋಡಿ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 14, 2023 | 10:53 AM

ಪತ್ರಕರ್ತರು ಅವರಿಗೆ, ‘ಸರ್, ಮುಖ್ಯಮಂತ್ರಿ ಸ್ಥಾನಕ್ಕೆ ಹೈಕಮಾಂಡ್ ಒಲವು ನಿಮ್ಮ ಪರ ಇದೆಯಾ?’ ಅಂತ ಕೇಳಿದಾಗ ಮೌನವಾಗಿ ಅಲ್ಲಿಂದ ಜಾರಿಕೊಳ್ಳುತ್ತಾರೆ.

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ನಿಸ್ಸಂದೇಹವಾಗಿ ಮಹಾಯುದ್ಧ ಗೆದ್ದಿದ್ದಾರೆ. ನಿಮಗೆ ನೆನಪಿರಬಹುದು, ಚುನಾವಣಾ ಪ್ರಚಾರದಲ್ಲಿದ್ದಾಗ ಅವರು ಕಾಂಗ್ರೆಸ್ ಗೆ (Congress) 141 ಸೀಟು ಬರುತ್ತವೆ ಎಂದು ಹೇಳುತ್ತಿದ್ದರು. ಆ ಸಂಖ್ಯೆ ಅವರು ಹೇಗೆ ಕಂಡುಕೊಂಡರೋ ಗೊತ್ತಿಲ್ಲ. ಕಾಂಗ್ರೆಸ್ ಗೆ 141 ಸೀಟು ಬರಲಿಲ್ಲವಾದರೂ ಅದರ ಹತ್ತಿರಕ್ಕೆ (136) ಪಕ್ಷದ ಟ್ಯಾಲಿ ಬಂತು. ಇವತ್ತು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಅವರು, ತಾನು 136 ಹೇಳಿದ್ದು ಅನ್ನುತ್ತಿದ್ದಾರೆ. ಬಿಡಿ, ಅದೇನೂ ಚರ್ಚೆಯ ವಿಷಯವಲ್ಲ, ಆದರೆ, ಪತ್ರಕರ್ತರು ಅವರಿಗೆ, ‘ಸರ್, ಮುಖ್ಯಮಂತ್ರಿ ಸ್ಥಾನಕ್ಕೆ ಹೈಕಮಾಂಡ್ (high command) ಒಲವು ನಿಮ್ಮ ಪರ ಇದೆಯಾ?’ ಅಂತ ಕೇಳಿದಾಗ ಮೌನವಾಗಿ ಅಲ್ಲಿಂದ ಜಾರಿಕೊಳ್ಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ