Sign In

By signing in or creating an account, you agree with Associated Broadcasting Company's Terms & Conditions and Privacy Policy.

Assembly Polls: ಸಿದ್ದರಾಮಯ್ಯ ಮತ್ತು ಮುನಿಯಪ್ಪ ನಡುವಿನ ಮುನಿಸಿಗೆ ಡಿಕೆ ಶಿವಕುಮಾರ್ ತೇಪೆ ಹಾಕುವಲ್ಲಿ ಸಫಲರಾದರೇ?

Assembly Polls: ಸಿದ್ದರಾಮಯ್ಯ ಮತ್ತು ಮುನಿಯಪ್ಪ ನಡುವಿನ ಮುನಿಸಿಗೆ ಡಿಕೆ ಶಿವಕುಮಾರ್ ತೇಪೆ ಹಾಕುವಲ್ಲಿ ಸಫಲರಾದರೇ?

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 03, 2023 | 2:59 PM

ಹಿಂದೆ, ಅವರು ಸಿದ್ದರಾಮಯ್ಯ ಕೋಲಾರಕ್ಕೆ ಹೋಗುವುದನ್ನು ವಿರೋಧಿಸಿದ್ದರು ಮತ್ತು ಅದೇ ಅಸಮಾಧಾನದಲ್ಲಿ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡಿರಲಿಲ್ಲ.

ಕೋಲಾರ:  ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಸಿದ್ದರಾಮಯ್ಯ (Siddaramaiah) ಮತ್ತು ಕೆಹೆಚ್ ಮುನಿಯಪ್ಪ (KH Muniyappa) ನಡುವಿನ ಮುನಿಸನ್ನು ದೂರ ಮಾಡುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಯಶ ಕಂಡಂತಿದೆ. ಕೋಲಾರದಲ್ಲಿ ಇಂದು ಮುನಿಯಪ್ಪನವರು ಮಾಧ್ಯಮದವರೊಂದಿಗೆ ಮಾತಾಡುವಾಗ ಮುನಿಯಪ್ಪ, ಸಿದ್ದರಾಮಯ್ಯ ಕೋಲಾರದಿಂದ ಸ್ಫರ್ಧಿಸಲು ನಿರ್ಧರಿಸಿರುವುದಕ್ಕೆ ಸ್ವಾಗತ ಬಯಸಿದ್ದೇನೆ ಎಂದು ಹೇಳಿ ಮಾಧ್ಯಮದವರನ್ನು ಚಕಿತಗೊಳಿಸಿದರು. ಹಿಂದೆ, ಅವರು ಸಿದ್ದರಾಮಯ್ಯ ಕೋಲಾರಕ್ಕೆ ಹೋಗುವುದನ್ನು ವಿರೋಧಿಸಿದ್ದರು ಮತ್ತು ಅದೇ ಅಸಮಾಧಾನದಲ್ಲಿ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ ಶುಕ್ರವಾರ ಅವರ ವರಸೆ ಬದಲಾಗಿತ್ತು ಮತ್ತು ಯಾತ್ರೆಯಲ್ಲೂ ಸಕ್ರಿಯವಾಗಿ ಭಾಗವಹಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 03, 2023 02:58 PM