AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DK Shivakumar: ಈಗಲೂ ಡಿಕೆ ಶಿವಕುಮಾರ್ ಗೆಲುವಾಗಿಲ್ಲ, ಮಾಧ್ಯಮದರೊಂದಿಗೆ ಮಾತಾಡಲು ಅವರಿಗೆ ಮನಸ್ಸಿಲ್ಲ!

DK Shivakumar: ಈಗಲೂ ಡಿಕೆ ಶಿವಕುಮಾರ್ ಗೆಲುವಾಗಿಲ್ಲ, ಮಾಧ್ಯಮದರೊಂದಿಗೆ ಮಾತಾಡಲು ಅವರಿಗೆ ಮನಸ್ಸಿಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 18, 2023 | 12:39 PM

Share

ಅವರು ಹೇಳಿದ್ದು ಒಂದು ಲೈನ್ ಮಾತ್ರ, ‘ಈವತ್ತು ಸಾಯಂಕಾಲ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ, ಎಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ.’

ದೆಹಲಿ: ರಾಜ್ಯದ ಮುಂದಿಮ ಮುಖ್ಯಮಂತ್ರಿ ಕುರಿತಾದ ಬಿಕ್ಕಟ್ಟು ಬಗೆಹರಿದಿದ್ದರೂ ಡಿಕೆ ಶಿವಕುಮಾರ್ (DK Shivakumar) ಮುಖದಲ್ಲಿ ಎಂದಿನ ಕಳೆ, ಗೆಲುವು ಕಾಣುತ್ತಿಲ್ಲ. ಇಂದು ಬೆಳಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ (KC Venugopal) ಅವರ ಮನೆಯಲ್ಲಿ ಉಪಹಾರ ಸೇವಿಸಿ ಹೊರಬಿದ್ದ ಬಳಿಕ ಮಾಧ್ಯಮ ಪ್ರತಿನಿಧಿಗಳು (media persons) ಅವರನ್ನು ಸುತ್ತುವರಿದರು. ಆದರೆ ಶಿವಕುಮಾರ್ ಉತ್ತರಿಸುವ ಗೋಜಿಗೆ ಹೋಗಲಿಲ್ಲ, ತಮ್ಮ ಪಾಡಿಗೆ ತಾವು ಕಾರು ಹತ್ತಿ ಹೊರಡಲುನುವಾದಾಗ ಪತ್ರಕರ್ತರು ಅವರ ಬೆನ್ನಟ್ಟಿದ್ದರು. ಅಂತಿಮವಾಗಿ ಶಿವಕುಮಾರ್ ಬಾಯಿ ಬಿಡಲೇ ಬೇಕಾಯಿತು. ಅವರು ಹೇಳಿದ್ದು ಒಂದು ಲೈನ್ ಮಾತ್ರ, ‘ಈವತ್ತು ಸಾಯಂಕಾಲ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ, ಎಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ.’

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ