DK Shivakumar: ಈಗಲೂ ಡಿಕೆ ಶಿವಕುಮಾರ್ ಗೆಲುವಾಗಿಲ್ಲ, ಮಾಧ್ಯಮದರೊಂದಿಗೆ ಮಾತಾಡಲು ಅವರಿಗೆ ಮನಸ್ಸಿಲ್ಲ!
ಅವರು ಹೇಳಿದ್ದು ಒಂದು ಲೈನ್ ಮಾತ್ರ, ‘ಈವತ್ತು ಸಾಯಂಕಾಲ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ, ಎಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ.’
ದೆಹಲಿ: ರಾಜ್ಯದ ಮುಂದಿಮ ಮುಖ್ಯಮಂತ್ರಿ ಕುರಿತಾದ ಬಿಕ್ಕಟ್ಟು ಬಗೆಹರಿದಿದ್ದರೂ ಡಿಕೆ ಶಿವಕುಮಾರ್ (DK Shivakumar) ಮುಖದಲ್ಲಿ ಎಂದಿನ ಕಳೆ, ಗೆಲುವು ಕಾಣುತ್ತಿಲ್ಲ. ಇಂದು ಬೆಳಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ (KC Venugopal) ಅವರ ಮನೆಯಲ್ಲಿ ಉಪಹಾರ ಸೇವಿಸಿ ಹೊರಬಿದ್ದ ಬಳಿಕ ಮಾಧ್ಯಮ ಪ್ರತಿನಿಧಿಗಳು (media persons) ಅವರನ್ನು ಸುತ್ತುವರಿದರು. ಆದರೆ ಶಿವಕುಮಾರ್ ಉತ್ತರಿಸುವ ಗೋಜಿಗೆ ಹೋಗಲಿಲ್ಲ, ತಮ್ಮ ಪಾಡಿಗೆ ತಾವು ಕಾರು ಹತ್ತಿ ಹೊರಡಲುನುವಾದಾಗ ಪತ್ರಕರ್ತರು ಅವರ ಬೆನ್ನಟ್ಟಿದ್ದರು. ಅಂತಿಮವಾಗಿ ಶಿವಕುಮಾರ್ ಬಾಯಿ ಬಿಡಲೇ ಬೇಕಾಯಿತು. ಅವರು ಹೇಳಿದ್ದು ಒಂದು ಲೈನ್ ಮಾತ್ರ, ‘ಈವತ್ತು ಸಾಯಂಕಾಲ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ, ಎಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ.’
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ

