AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Breakfast meeting: ಡಿಕೆ ಸುರೇಶ್ ಬಾಗಿಲು ತಟ್ಟಿದ್ರೂ ಕೆಸಿ ವೇಣುಗೋಪಾಲ್ ಮನೆಬಾಗಿಲು ತೆರೆದುಕೊಳ್ಳಲಿಲ್ಲ!

Breakfast meeting: ಡಿಕೆ ಸುರೇಶ್ ಬಾಗಿಲು ತಟ್ಟಿದ್ರೂ ಕೆಸಿ ವೇಣುಗೋಪಾಲ್ ಮನೆಬಾಗಿಲು ತೆರೆದುಕೊಳ್ಳಲಿಲ್ಲ!

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: May 18, 2023 | 11:55 AM

Share

ವೇಣುಗೋಪಾಲ್ ಮನೆಯೊಳಗೆ ಎಷ್ಟು ಇಂಟೆನ್ಸ್ ಮಾತುಕತೆ ನಡೆಯುತ್ತಿದ್ದರೆಂದರೆ, ಹೊರಗಡೆ ಸಂಸದ ಡಿಕೆ ಸುರೇಶ್ ಬಾಗಿಲು ತಟ್ಟಿದರೂ ಕ್ಯಾರೆ ಅನ್ನುವವರಿರಲಿಲ್ಲ.

ದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳು ತೀವ್ರ ಸ್ವರೂಪದಲ್ಲಿ ನಡೆಯುತ್ತಿವೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಕೆಸಿ ವೇಣುಗೋಪಾಲ್ (KC Venugopal) ಇಂದು ತಮ್ಮ ನಿವಾಸದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ (DK Shivakumar) ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದರು. ಅವರೊಂದಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಕೂಡ ಇದ್ದರು. ವೇಣುಗೋಪಾಲ್ ಮನೆಯೊಳಗೆ ಎಷ್ಟು ಇಂಟೆನ್ಸ್ ಮಾತುಕತೆ ನಡೆಯುತ್ತಿದ್ದರೆಂದರೆ, ಹೊರಗಡೆ ಸಂಸದ ಡಿಕೆ ಸುರೇಶ್ (DK Suresh) ಬಾಗಿಲು ತಟ್ಟಿದರೂ ಕ್ಯಾರೆ ಅನ್ನುವವರಿರಲಿಲ್ಲ. ಸುರೇಶ್ ಬಾಗಿಲು ತಟ್ಟುತ್ತಾ ಕಾಯುತ್ತಲೇ ಇದ್ದರು, ಆದರೆ ಬಾಗಿಲು ಮಾತ್ರ ತೆರೆಯಲಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.