ಕುಮಾರಸ್ವಾಮಿ ವಿಧಾನಸೌಧದಲ್ಲಿ ಮಾತಾಡಿದ ಆಡಿಯೋವೊಂದನ್ನು ಬಿಡುಗಡೆ ಮಾಡಿದ ಡಿಕೆ ಸುರೇಶ್
ಸುರೇಶ್ ಆಡಿಯೋ ಬಿಡುಗಡೆ ಮಾಡಿದ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದ್ದರು. ಕಾಂಗ್ರೆಸ್ ಮತ್ತು ಎನ್ಡಿಎ ಒಕ್ಕೂಟ ಚನ್ನಪಟ್ಟಣ ಉಪ ಚುನಾವಣೆಯನ್ನು ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಿವೆ. ಕುಮಾರಸ್ವಾಮಿಗೆ ಮಗನನ್ನು ರೀಲಾಂಚ್ ಮಾಡುವ ಉಮೇದಿಯಿದ್ದರೆ ಯೋಗೇಶ್ವರ್ ರನ್ನು ಗೆಲ್ಲಿಸಿ ಕುಮಾರಸ್ವಾಮಿಯ ಪ್ರಭಾv ಕಮ್ಮಿ ಮಾಡುವ ಗುರಿ ಕಾಂಗ್ರೆಸ್ಗಿದೆ.
ಚನ್ನಪಟ್ಟಣ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಆಡಿಯೋಗಳನ್ನು ಸಾರ್ವಜನಿಕಗೊಳಿಸುವ ಕೆಲಸ ಶುರುವಾಗಿದೆ. ಚುನಾವಣೆಗಳನ್ನು ಐದು ವರ್ಷಕ್ಕೊಮ್ಮೆ ಮಾಡುವ ಅಗತ್ಯವಿಲ್ಲ, ಚುನಾವಣೆಗಳನ್ನು ಗೆಲ್ಲಲು ಮತದಾರರ ಬಳಿಗೆ ಹೋಗಲೇಬೇಕು ಅಂತೇನಿಲ್ಲ, ಅದಕ್ಕೆ ತಂತ್ರಗಾರಿಕೆ ಬೇಕು, ಮತದಾನಕ್ಕೆ ಇನ್ನೂ ಒಂದು ವಾರ ಇದೆ ಅನ್ನುವಾಗ ಕ್ಷೇತ್ರಗಳಿಗೆ ಹೋಗಿ ಈ ತಂತ್ರಗಾರಿಕೆಯನ್ನು ಬಳಸಿದರೆ ಸಾಕು ಎಂದು ಹೆಚ್ ಡಿ ಕುಮಾರಸ್ವಾಮಿಯವರು ವಿಧಾನಸೌಧದಲ್ಲಿ ಹೇಳಿದರೆನ್ನಲಾಗಿರುವ ಆಡಿಯೋವನ್ನು ಇಂದು ಬೇವೂರಲ್ಲಿ ಮಾಜಿ ಸಂಸದ ಡಿಕೆ ಸುರೇಶ್ ಬಿಡುಗಡೆ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಆಂಬ್ಯುಲೆನ್ಸ್ನಲ್ಲಿ ಪ್ರಚಾರಕ್ಕೆ ಬರ್ತಾರೆ: ದೇವೇಗೌಡ ವಿರುದ್ಧ ಡಿಕೆ ಸುರೇಶ್ ಹೇಳಿಕೆಯನ್ನೇ ಪ್ರತ್ಯಸ್ತ್ರ ಮಾಡಲು ಮುಂದಾದ ದಳ
Loading...
Unable to load recommendations.
Follow Us