ರಾಜಣ್ಣರ ಸೆಪ್ಟಂಬರ್ ಕ್ರಾಂತಿ ಹೇಳಿಕೆ ವಿಷಯದಲ್ಲಿ ಪ್ರತಿಕ್ರಿಯೆ ನೀಡಲಾರೆ, ಅವರು ದೊಡ್ಡೋರು: ವಿಜಯಾನಂದ ಕಾಶಪ್ಪನವರ್

Updated on: Jun 28, 2025 | 4:42 PM

ತಾನು ಯಾವುದೇ ಲಾಬಿ ಮಾಡಲು ಬೆಂಗಳೂರಿಗೆ ಬಂದಿಲ್ಲ, ಕ್ಷೇತ್ರದ ಅಬಿವೃದ್ಧಿ ಕಾರ್ಯಗಳ ನಿಮಿತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ಬಂದಿದ್ದೆ, ತಾನ್ಯಾವತ್ತು ಅಧಿಕಾರದ ಹಿಂದೆ ಬೆನ್ನತ್ತಿದ್ದವನಲ್ಲ, ಮಂತ್ರಿ ಸ್ಥಾನ ಬರಬೇಕಾದ ಸಮಯದಲ್ಲಿ ಬಂದೇ ಬರುತ್ತೆ ಎಂದು ಶಾಸಕ ಕಾಶಪ್ಪನವರ್ ಹೇಳಿದರು.

ಬೆಂಗಳೂರು, ಜೂನ್ 28: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಹುನುಗುಂದ ಶಾಸಕ ವಿಜಯಾನಂದ ಕಾಶಪ್ಪನವರ್, ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ಅವರ ಸೆಪ್ಟಂಬರ್ ಕ್ರಾಂತಿ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಲಿಲ್ಲ. ಅವರು ಹಿರಿಯರು, ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲಾರೆ, ನಾನೊಂದು ಜವಾಬ್ದಾರಿಯುತ ಸ್ಥಾನದಲ್ಲಿರುವವನು ಮತ್ತು ನನ್ನ ಕುಟುಂಬ ಸುಮಾರು 50 ವರ್ಷಗಳಿಂದ ರಾಜಕಾರಣದಲ್ಲಿದೆ, ಬದಲಾಣೆಯ ಬಗ್ಗೆ ಊಹಾಪೋಹಗಳು ಎಲ್ಲಿಂದ ಹುಟ್ಟಿದವು ಯಾಕೆ ಹುಟ್ಟಿದವು ಅಂತೆಲ್ಲ ಗೊತ್ತಿದೆ, ಬದಲಾವಣೆ ಆಗಬೇಕಾದರೆ ಅದನ್ನು ಹೈಕಮಾಂಡ್ ಮಾಡುತ್ತದೆ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜೀವ್ ಗಾಂಧಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಕಾಶಪ್ಪನವರ್ ಹೇಳಿದರು.

ಇದನ್ನೂ ಓದಿ:  ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಬಹುದಾದ ಸಾಧ್ಯತೆಯನ್ನೇ ರಾಜಣ್ಣ ಕ್ರಾಂತಿ ಎಂದಿರಬಹುದು: ಪಾಟೀಲ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ