AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Finish Siddaramaiah Comment: ತಮ್ಮ ಹೇಳಿಕೆಗೆ ಸದನದಲ್ಲಿ ವಿಷಾದ ವ್ಯಕ್ತಪಡಿಸಿದ ಡಾ ಸಿಎನ್ ಅಶ್ವಥ್ ನಾರಾಯಣ

Finish Siddaramaiah Comment: ತಮ್ಮ ಹೇಳಿಕೆಗೆ ಸದನದಲ್ಲಿ ವಿಷಾದ ವ್ಯಕ್ತಪಡಿಸಿದ ಡಾ ಸಿಎನ್ ಅಶ್ವಥ್ ನಾರಾಯಣ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 16, 2023 | 2:48 PM

Share

ಚುನಾವಣೆಯೂ ಒಂದು ಯುದ್ಧದ ಹಾಗೆ, ಸಿದ್ದರಾಮಯ್ಯನವರನ್ನು ಚುನಾವಣೆಯಲ್ಲಿ ಮುಗಿಸೋಣ ಅನ್ನೋ ಅರ್ಥದಲ್ಲಿ ತಾವು ಮಾತಾಡಿದ್ದು ಎಂದು ಅಶ್ವಥ್ ನಾರಾಯಣ ಹೇಳಿದರು.

ಬೆಂಗಳೂರು: ವಿರೋಧ ಪಕ್ಷದ ನಾಯಕರ ತರಾಟೆ ಮತ್ತು ಖುದ್ದು ಅವರ ಪಕ್ಷದ ಸದಸ್ಯರೇ ವ್ಯಕ್ತಪಡಿಸುತ್ತಿರುವ ಅಸಮಾಧಾನದಿಂದ ಕಂಗೆಟ್ಟಂತಾಗಿರುವ ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಸದನದಲ್ಲಿ ಇಂದಿನ ಕಾರ್ಯಕಲಾಪಗಳ ನಡುವೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ (Siddaramaiah) ವಿರುದ್ಧ ಮಾಡಿದ ಮುಗಿಸಬೇಕು ಕಾಮೆಂಟ್ ಗೆ ವಿಷಾದ ವ್ಯಕ್ತಪಡಿಸಿದರು. ಅದಕ್ಕೂ ಮೊದಲು ಅವರು ಕಾಂಗ್ರೆಸ್ ಶಾಸಕರಿಂದ ತೀವ್ರ ಸ್ವರೂಪದ ಟೀಕೆಗೆ ಗುರಿಯಾದರು. ಚುನಾವಣೆಯೂ (election) ಒಂದು ಯುದ್ಧದ ಹಾಗೆ, ಸಿದ್ದರಾಮಯ್ಯನವರನ್ನು ಚುನಾವಣೆಯಲ್ಲಿ ಮುಗಿಸೋಣ ಅನ್ನೋ ಅರ್ಥದಲ್ಲಿ ತಾವು ಮಾತಾಡಿದ್ದು ಎಂದು ಅಶ್ವಥ್ ನಾರಾಯಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ