Chikmagalur: ರಸ್ತೆ ಬದಿ ಸನ್​ಗ್ಲಾಸ್ ಮಾರುತ್ತಿದ್ದ ಮಹಿಳೆ ಮೇಲೆ ಪಾನಮತ್ತ ಯುವಕರಿಂದ ದೌರ್ಜನ್ಯ, ಗ್ಲಾಸ್​ಗಳು ಚೂರು ಚೂರು!

Updated on: Jun 23, 2023 | 5:07 PM

ಸ್ಥಳೀಯರಲ್ಲಿ ಮೊಬೈಲ್ ಫುಟೇಜ್ ಇರುವುದರಿಂದ ದುರುಳರನ್ನು ಪತ್ತೆ ಮಾಡುವುದು ಪೊಲೀಸರಿಗೆ ಕಷ್ಟವಾಗಲಾರದು.

ಚಿಕ್ಕಮಗಳೂರು: ತಾರುಣ್ಯದ ಮದ, ಕುಡಿತದ ಅಮಲು (drunken state) ಕೆಲ ಪುಂಡರಿಂದ ಈ ಕೆಲಸ ಮಾಡಿಸಿದೆ. ರಸ್ತೆ ಬದಿ ಕುಳಿತು ಗಾಗಲ್ ಗಳನ್ನು, ಸನ್ ಗ್ಲಾಸ್ ಗಳನ್ನು (sunglasses) ಮಾರಿ ಬದುಕಿ ನಡೆಸುವ ಒಬ್ಬ ಮುಗ್ಧ ಮಹಿಳೆಯ (innocent woman) ಮೇಲೆ ಪುಂಡ ಯುವಕರು ದಾಂಧಲೆ ಮಾಡಿ ಕನ್ನಡಕ ಗಳನ್ನು ಒಡೆದು ಹಾಕಿದ್ದಾರೆ. ಅವಿವೇಕಿ ಯುವಕರು ದೌರ್ಜನ್ಯ ಮೆರೆದು ಬೈಕ್ ಹತ್ತಿ ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಘಟನೆ ನಗರದ ಕೋಟೆಕೆರೆ ಏರಿಯಾದಲ್ಲಿ ನಡೆದಿದ್ದು, ಇದು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುತ್ತದೆ. ಸ್ಥಳೀಯರಲ್ಲಿ ಯುವಕರು ನಡೆಸಿದ ದಾಂಧಲೆಯ  ಮೊಬೈಲ್ ಫುಟೇಜ್ ಇರುವುದರಿಂದ ದುರುಳರನ್ನು ಪತ್ತೆ ಮಾಡುವುದು ಪೊಲೀಸರಿಗೆ ಕಷ್ಟವಾಗಲಾರದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More