New Year 2022 Celebration: ನಿನ್ನೆಯ ಪಾರ್ಟಿ ಅಮಲು ಇನ್ನೂ ಕಡಿಮೆಯಾಗಲಿಲ್ಲವೇ? ಈ ವಿಧಾನ ಅನುಸರಿಸಿ ಮತ್ತೆ ಕೆಲಸಕ್ಕೆ ಮರಳಿ

ವಾಸ್ತವವಾಗಿ ಆಲ್ಕೊಹಾಲ್ ಸೇವನೆಯು ದೇಹದ ಜೈವಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ತಲೆನೋವು, ವಾಂತಿ, ನಿರ್ಜಲೀಕರಣ, ವಾಕರಿಕೆ, ದೇಹ ನೋವು ಇತ್ಯಾದಿ ಸಮಸ್ಯೆಗಳು ಎದುರಾಗುತ್ತವೆ. ಹೊಸ ವರ್ಷದ ಪಾರ್ಟಿಯ ನಂತರ ನೀವು ಹ್ಯಾಂಗೊವರ್‌ನಿಂದ ಬಳಲುತ್ತಿದ್ದರೆ, ಈ ವಿಧಾನಗಳನ್ನು ಅನುಸರಿಸಿ.

New Year 2022 Celebration: ನಿನ್ನೆಯ ಪಾರ್ಟಿ ಅಮಲು ಇನ್ನೂ ಕಡಿಮೆಯಾಗಲಿಲ್ಲವೇ? ಈ ವಿಧಾನ ಅನುಸರಿಸಿ ಮತ್ತೆ ಕೆಲಸಕ್ಕೆ ಮರಳಿ
ಸಾಂದರ್ಭಿಕ ಚಿತ್ರ
Follow us
| Updated By: preethi shettigar

Updated on: Jan 02, 2022 | 7:05 AM

ಹೊಸ ವರ್ಷ (2022) ಬಂದೆ ಬಿಟ್ಟಿದೆ. ಪ್ರತಿ ವರ್ಷದಂತೆ ನೀವು ಈ ವರ್ಷವನ್ನು ಅತ್ಯಂತ ಉತ್ಸಾಹದಿಂದ ಸ್ವಾಗತಿಸಿರುತ್ತೀರ ಮತ್ತು ಹೊಸ ಚೈತನ್ಯದಿಂದ ಹೊಸ ವರ್ಷವನ್ನು ಸಂಭ್ರಮಿಸಿರುತ್ತೀರ. ಅದರಲ್ಲೂ ವಿಕೇಂಡ್​​ನಲ್ಲಿ ಹೊಸ ವರ್ಷವಿರುವುದು ಅದರ ಖುಷಿಯನ್ನು ಇಮ್ಮಡಿಗೊಳಿಸಿದೆ. ಮತ್ತೊಂದೆಡೆ ಡಿಸೆಂಬರ್ 31 ರ ರಾತ್ರಿ ನೈಟ್​ ಕರ್ಫ್ಯೂನಿಂದಾಗಿ ಆಚರಣೆಗೆ ಕೊಂಚ ಬ್ರೇಕ್​ ಬಿದ್ದಿದೆ. ಆದರೆ ಕುಟುಂಬ ಮತ್ತು ಸ್ನೇಹಿತರ ನಡುವೆ ನಿಯಮ ಉಲ್ಲಂಘಿಸದೆ ಹೊಸ ವರ್ಷ ಆಚರಿಸಲು ಅವಕಾಶ ಇತ್ತು. ಹೀಗಾಗಿ ಸ್ನೇಹಿತರ ಜತೆ ಅನೇಕರು ಪಾರ್ಟಿ ಮಾಡಿರುತ್ತಾರೆ. ಪಾರ್ಟಿ ಅಂತ ಬಂದಾಗ ಅನೇಕರು ಮದ್ಯಪಾನ ಮಾಡುತ್ತಾರೆ. ಅದು ಇತ್ತೀಚೆಗೆ ಸಾಮಾನ್ಯ. ಸ್ನೇಹಿತರು ಮತ್ತು ಪ್ರೀತಿಪಾತ್ರರ ಜೊತೆ ಪಾರ್ಟಿ ಮಾಡುವಾಗ ಜನರು ಹೆಚ್ಚಾಗಿ ಕುಡಿಯುತ್ತಾರೆ. ಆದರೆ ಮರುದಿನ ಈ ಕುಡಿತದ ಹ್ಯಾಂಗೊವರ್‌ನಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಸ್ತವವಾಗಿ ಆಲ್ಕೊಹಾಲ್ ಸೇವನೆಯು ದೇಹದ ಜೈವಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ತಲೆನೋವು, ವಾಂತಿ, ನಿರ್ಜಲೀಕರಣ, ವಾಕರಿಕೆ, ದೇಹ ನೋವು ಇತ್ಯಾದಿ ಸಮಸ್ಯೆಗಳು ಎದುರಾಗುತ್ತವೆ. ಹೊಸ ವರ್ಷದ ಪಾರ್ಟಿಯ ನಂತರ ನೀವು ಹ್ಯಾಂಗೊವರ್‌ನಿಂದ ಬಳಲುತ್ತಿದ್ದರೆ, ಈ ವಿಧಾನಗಳನ್ನು ಅನುಸರಿಸಿ.

ಹ್ಯಾಂಗೊವರ್‌ನಿಂದ ಹೊರಬರಲು ಮಾರ್ಗಗಳನ್ನು ಅನುಸರಿಸಿ

ಉಗುರುಬೆಚ್ಚನೆಯ ನೀರನ್ನು ಕುಡಿಯಿರಿ ಬೆಳಿಗ್ಗೆ ಎದ್ದ ತಕ್ಷಣ ಸಾಕಷ್ಟು ಉಗುರುಬೆಚ್ಚನೆಯ ನೀರನ್ನು ಕುಡಿಯಿರಿ. ಅಥವಾ ನೀರಿನಲ್ಲಿ ನಿಂಬೆ ರಸವನ್ನು ಹಿಂಡಿ ಕುಡಿದರೆ, ನಿಮ್ಮ ದೇಹದಲ್ಲಿನ ನಿರ್ಜಲೀಕರಣದ ಸಮಸ್ಯೆಯನ್ನು ನಿವಾರಿಸಬಹುದು. ಇದರೊಂದಿಗೆ ನಿಮ್ಮ ದೇಹದ ವಿಷಕಾರಿ ಅಂಶಗಳು ಹೊರಬರುತ್ತವೆ. ನೀವು ನೀರು ಕುಡಿದ ನಂತರ ವಾಂತಿ ಮಾಡಿದರೆ, ಭಯಪಡುವ ಅಗತ್ಯ ಇಲ್ಲ. ವಾಂತಿ ಆದರೆ ಆರಾಮವಾದಂತೆ ಆಗುತ್ತದೆ. ಮದ್ಯಪಾನ ಮಾಡಿದ ನಂತರದ ದಿನದಲ್ಲಿ ಹೆಚ್ಚು ದ್ರವ ಆಹಾರವನ್ನು ಸೇವಿಸಿ.

ಬಿಸಿ ನೀರಿನಲ್ಲಿ ಸ್ನಾನ ಮಾಡಿ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಹ್ಯಾಂಗೊವರ್ ಕೂಡ ನಿವಾರಣೆಯಾಗುತ್ತದೆ. ನೀವು ಸ್ನಾನ ಮಾಡುವ ಸ್ಥಿತಿಯಲ್ಲಿಲ್ಲದಿದ್ದರೆ, ನೀವು ಸ್ಟೀಮ್​ ತೆಗೆದುಕೊಳ್ಳಬಹುದು. ಸ್ಟೀಮ್ ತೆಗೆದುಕೊಳ್ಳುವುದರಿಂದ ಮೂಡ್​ ಸರಿಯಾಗುತ್ತದೆ. ಇದಲ್ಲದೆ, ಬೆಚ್ಚಗಿನ ನೀರಿನಲ್ಲಿ ಟವೆಲ್ ಅನ್ನು ನೆನೆಸಿ ದೇಹವನ್ನು ಒರೆಕೊಳ್ಳಬಹುದು. ಇನ್ನು ಬೆಳಗ್ಗೆ ತಿಂಡಿ ಸೇವಿಸುವಾಗ ಹುಳಿ ಮೊಸರನ್ನು ಸೇವಿಸಿ. ಇದು ನಿಮ್ಮ ಹ್ಯಾಂಗೊವರ್ ಅನ್ನು ತೆಗೆದುಹಾಕುತ್ತದೆ.

ಪೊಟ್ಯಾಸಿಯಮ್ ಕೊರತೆ ಕುಡಿದ ನಂತರ ದೇಹದಲ್ಲಿ ಪೊಟ್ಯಾಸಿಯಮ್ ಕೊರತೆಯಿಂದಾಗಿ ಆಯಾಸ ಮತ್ತು ದೌರ್ಬಲ್ಯ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಖನಿಜಗಳು ಮತ್ತು ಎಲೆಕ್ಟ್ರೋಲೈಟ್‌ಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣಿನ ಸ್ಮೂಥಿಯನ್ನು ಜೇನುತುಪ್ಪದೊಂದಿಗೆ ಸೇವಿಸಿ. ಇದು ಸಾಕಷ್ಟು ಪರಿಹಾರವನ್ನು ನೀಡುತ್ತದೆ. ಹ್ಯಾಂಗೊವರ್ ತಪ್ಪಿಸಲು ನೀವು ಕುಡಿಯುವ ಮೊದಲು ಬಾಳೆಹಣ್ಣು ಸೇವಿಸಬಹುದು. ಇದು ನಿಮ್ಮ ದೇಹದಲ್ಲಿ ಪೊಟ್ಯಾಸಿಯಮ್ ಕೊರತೆಯನ್ನು ಕಡಿಮೆ ಮಾಡುತ್ತದೆ.

ವ್ಯಾಯಾಮ ಮಾಡಿ ಇನ್ನು ನಿಮಗೆ ಆರಾಮ ಅನಿಸದಿದ್ದರೆ, ಬೆಳಿಗ್ಗೆ ಎಚ್ಚರಗೊಂಡಾಗ ವ್ಯಾಯಾಮ ಮಾಡಿ ಅಥವಾ ವಾಕಿಂಗ್​ ಮಾಡಿ. ಇದರಿಂದಾಗಿ ದೇಹದ ವಿಷಕಾರಿ ಅಂಶಗಳು ಬೆವರಿನ ರೂಪದಲ್ಲಿ ಹೊರಬರುತ್ತವೆ ಮತ್ತು ನಿಮ್ಮ ಚಯಾಪಚಯವು ಶೀಘ್ರದಲ್ಲೇ ಸಾಮಾನ್ಯವಾಗುತ್ತದೆ.

ಎಳನೀರು ಕುಡಿಯಿರಿ ಆಲ್ಕೋಹಾಲ್ ಸೇವನೆಯು ದೇಹದಲ್ಲಿ ಶುಷ್ಕತೆಯನ್ನು ಹೆಚ್ಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಎಳನೀರು ತುಂಬಾ ಪ್ರಯೋಜನಕಾರಿಯಾಗಿದೆ. ಎಳನೀರು ಸಾಕಷ್ಟು ಎಲೆಕ್ಟ್ರೋಲೈಟ್‌ಗಳನ್ನು ಹೊಂದಿರುತ್ತದೆ. ಹ್ಯಾಂಗೊವರ್ ಅನ್ನು ತೆಗೆದುಹಾಕುವುದರ ಜೊತೆಗೆ, ಎಳನೀರು ಆಯಾಸ, ಸ್ನಾಯು ನೋವನ್ನು ನಿವಾರಿಸುತ್ತದೆ ಮತ್ತು ಹೊಟ್ಟೆಯನ್ನು ಸಮತೋಲನಗೊಳಿಸುತ್ತದೆ.

ಇದನ್ನೂ ಓದಿ: Health Care Tips: ಸೀತಾಫಲ ತಿಂದರೆ ಆರೋಗ್ಯದಲ್ಲಿ ಅನೇಕ ಬದಲಾವಣೆಗಳಾಗುತ್ತದೆ; ಅಪಾಯದ ಬಗ್ಗೆ ಇರಲಿ ಎಚ್ಚರ

ಹಸಿ ಈರುಳ್ಳಿ ತಿನ್ನುವ ಅಭ್ಯಾಸ ಇದೆಯೇ? ಗಂಭೀರ ಕಾಯಿಲೆಗೆ ಕಾರಣವಾಗಬಹುದು ಎಚ್ಚರ ವಹಿಸಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ