ಎಂಥ ಕಾಲ ನೋಡ್ರಪ್ಪಾ …ಬುದ್ಧಿ ಹೇಳಿದ್ದಕ್ಕೆ ಕುಚಿಕು ಗೆಳೆಯನನ್ನ ಹತ್ಯೆಗೈದ ಸ್ನೇಹಿತ

Updated on: Nov 02, 2025 | 4:51 PM

ಸಂಬಂಧಿಗಳಿಗಿಂತ ಸ್ನೇಹಿತರೇ ಕಷ್ಟ ಕಾಲದಲ್ಲಿ ಇರುತ್ತಾರೆ ಎನ್ನುವ ಮಾತಿದೆ. ಗೆಳೆತನ ಅಂದ್ರೆನೇ ಹಾಗೇ ಪರಸ್ಪರ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ. ಜೊತೆಗೆ ಸ್ನೇಹಿತ ಏನಾದ್ರೂ ತಪ್ಪು ಮಾಡುತ್ತಿದ್ದರೆ ಈ ರೀತಿ ಮಾಡಡಬೇಡ ಅಂತೆಲ್ಲ ಸಲಹೆ ಸೂಚನೆ ಕೊಡುವುದು ಉಂಟು. ಆದ್ರೆ, ಇಲ್ಲೋರ್ವ ಗೆಳೆಯ ಕುಡಿಯಬೇಡ ಎಂದಿದ್ದಕ್ಕೆ ದುರಂತ ಸಾವುಕಂಡಿದ್ದಾನೆ. ಹೌದು... ರಮೇಶ್​ ಎನ್ನುವಾತ ಕಲ್ಲಿನಿಂದ ಹೊಡೆದು ತನ್ನ ಗೆಳೆಯ ಗಿರೀಶ್​ ((44)) ಎನ್ನುವಾತನನ್ನು ​​ ಹತ್ಯೆಗೈದಿದ್ದಾನೆ.

ಹಾಸನ, (ನವೆಂಬರ್ 02): ಸಂಬಂಧಿಗಳಿಗಿಂತ ಸ್ನೇಹಿತರೇ ಕಷ್ಟ ಕಾಲದಲ್ಲಿ ಇರುತ್ತಾರೆ ಎನ್ನುವ ಮಾತಿದೆ. ಗೆಳೆತನ ಅಂದ್ರೆನೇ ಹಾಗೇ ಪರಸ್ಪರ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ. ಜೊತೆಗೆ ಸ್ನೇಹಿತ ಏನಾದ್ರೂ ತಪ್ಪು ಮಾಡುತ್ತಿದ್ದರೆ ಈ ರೀತಿ ಮಾಡಡಬೇಡ ಅಂತೆಲ್ಲ ಸಲಹೆ ಸೂಚನೆ ಕೊಡುವುದು ಉಂಟು. ಆದ್ರೆ, ಇಲ್ಲೋರ್ವ ಗೆಳೆಯ ಕುಡಿಯಬೇಡ ಎಂದಿದ್ದಕ್ಕೆ ದುರಂತ ಸಾವುಕಂಡಿದ್ದಾನೆ. ಹೌದು… ರಮೇಶ್​ ಎನ್ನುವಾತ ಕಲ್ಲಿನಿಂದ ಹೊಡೆದು ತನ್ನ ಗೆಳೆಯ ಗಿರೀಶ್​ ((44)) ಎನ್ನುವಾತನನ್ನು ​​ ಹತ್ಯೆಗೈದಿದ್ದಾನೆ.

ಕುಡಿಯೋದು ಬಿಡು ಎಂದು ಬುದ್ಧಿವಾದ ಹೇಳಿದ್ದಕ್ಕೆ ದುರುಳ ಸ್ನೇಹಿತನನ್ನೇ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ರಾಂಪುರದಲ್ಲಿ ನಡೆದಿದೆ. ರಮೇಶ್​ ಮದ್ಯಸೇವಿಸಿ ಗಿರೀಶ್​ ಬಳಿ ಬಂದಿದ್ದ. ಆ ವೇಳೆ ರಮೇಶ್ ಕುಡಿಯಬೇಡ ಎಂದು ಗಿರೀಶ್​ ಗೆ ಬುದ್ಧಿ ಹೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ರಮೇಶ್, ಕಲ್ಲಿನಿಂದ ಗರೀಶ್​​ನ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.