ಧ್ರುವಂತ್ ಎದುರು ಪೇಚಿಗೆ ಸಿಲುಕಿದ ರಕ್ಷಿತಾ ಶೆಟ್ಟಿ: ಉಳಿದವರಿಗೆ ಸಖತ್ ನಗು

Updated on: Nov 18, 2025 | 5:15 PM

ರಕ್ಷಿತಾ ಶೆಟ್ಟಿ ಸರಿಯಾಗಿ ಮೈಕ್ ಧರಿಸಿರಲಿಲ್ಲ. ಆದ್ದರಿಂದ ಎಲ್ಲರ ಬಳಿ ಹೋಗಿ ಕ್ಷಮೆ ಕೇಳುವಂತೆ ಅವರಿಗೆ ಕ್ಯಾಪ್ಟನ್ ರಘು ಆದೇಶಿಸಿದ್ದಾರೆ. ತಮ್ಮ ಬಳಿ ಕ್ಷಮೆ ಕೇಳಲು ಬಂದ ರಕ್ಷಿತಾ ಶೆಟ್ಟಿಯನ್ನು ಧ್ರುವಂತ್ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ನ.18ರ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ..

ಸ್ಪರ್ಧಿಗಳು ಬಿಗ್ ಬಾಸ್ (Bigg Boss Kannada Season 12) ಮನೆಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕೆ ಶಿಕ್ಷೆ ಆಗುತ್ತಿದೆ. ಈ ವಾರ ನಿಯಮಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ನಿಯಮ ಮುರಿದವರಿಗೆ ಶಿಕ್ಷೆ ನೀಡುವುದು ಕ್ಯಾಪ್ಟನ್ ರಘು ಅವರ ಕೆಲಸ. ರಕ್ಷಿತಾ ಶೆಟ್ಟಿ (Rakshita Shetty) ಅವರು ಸರಿಯಾಗಿ ಮೈಕ್ ಧರಿಸಿರಲಿಲ್ಲ. ಹಾಗಾಗಿ ಅವರು ಎಲ್ಲರ ಬಳಿ ಹೋಗಿ ಕ್ಷಮೆ ಕೇಳುಬೇಕು ಎಂದು ಕ್ಯಾಪ್ಟನ್ ರಘು ಆದೇಶಿಸಿದ್ದಾರೆ. ತಮ್ಮ ಬಳಿ ಕ್ಷಮೆ ಕೇಳಲು ಬಂದ ರಕ್ಷಿತಾ ಶೆಟ್ಟಿಯನ್ನು ಧ್ರುವಂತ್ ಅವರು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಅದನ್ನು ಕಂಡು ಇನ್ನುಳಿದವರಿಗೆ ಸಖತ್ ನಗು ಬಂದಿದೆ. ಇದರಿಂದ ಬೇಸರಗೊಂಡ ರಕ್ಷಿತಾ ಶೆಟ್ಟಿ ಅವರು ‘ಇನ್ನು ಯಾವತ್ತೂ ಮೈಕ್ ತಪ್ಪಾಗಿ ಹಾಕಿಕೊಳ್ಳಲ್ಲ’ ಎಂದು ನಿರ್ಧರಿಸಿದ್ದಾರೆ. ರಕ್ಷಿತಾ ಶೆಟ್ಟಿ ಅವರನ್ನು ಕಂಡರೆ ಧ್ರುವಂತ್ (Druvanth) ಅವರಿಗೆ ಅಸಮಾಧಾನ ಇದೆ. ಅದನ್ನು ಅವರು ಈಗಾಗಲೇ ಅನೇಕ ಬಾರಿ ಹೇಳಿಕೊಂಡಿದ್ದುಂಟು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More