ನಾಲ್ಕು ಮರಿಗಳೊಂದಿಗೆ ಹೊಂಡಕ್ಕೆ ಬಂದ ನೀರು ಕುಡಿದ ತಾಯಿ ಹುಲಿ, ನಾಗರಹೊಳೆಯಲ್ಲಿ ಸೆರೆಸಿಕ್ಕ ದೃಶ್ಯ

ಅರುಣ್​ ಕುಮಾರ್​ ಬೆಳ್ಳಿ

Updated on: Jan 02, 2025 | 10:49 AM

ಭಾರತದಲ್ಲಿ ಹುಲಿಗಳ ಸಂತತಿ ಹೆಚ್ಚುತ್ತಿರುವುದು ಸಂತೋಷಕರ ಸಂಗತಿ. ಇದರಲ್ಲಿ ನಾಗರಹೊಳೆ ರಕ್ಷಿತಾರಣ್ಯದ ಹುಲಿಗಳ ಕೊಡುಗೆಯೂ ಇದೆ. ಹುಲಿ ಹಿಂಸ್ರಪಶುವಾದರೂ ಬೇರೆಲ್ಲ ಪ್ರಾಣಿಗಳ ಹಾಗೆ ತನ್ನ ಮರಿಗಳ ವಿಷಯದಲ್ಲಿ ಅತೀವ ಕಾಳಜಿ ಮತ್ತು ಮಮತೆಯನ್ನು ಹೊಂದಿರುತ್ತದೆ. ಈ ವಿಡಿಯೋದಲ್ಲಿ ತಾಯಿ ಹುಲಿ ನೀರು ಕುಡಿಯುತ್ತಿರುವುದು ನಿಜವಾದರೂ ಒಂದು ದೃಷ್ಟಿ ತನ್ನ ಮಕ್ಕಳ ಮೇಲೆ ಇಟ್ಟಿದೆ.

ಮೈಸೂರು: ನಾಗರಹೊಳೆ ಸಫಾರಿ ಸಂದರ್ಭದಲ್ಲಿ ವನ್ಯಜೀವಿ ಪ್ರೇಮಿ ಪ್ರವಾಸಿಗರಿಗೆ ಸೆರೆ ಸಿಕ್ಕಿರುವ ದೃಶ್ಯವಿದು. ಕಬಿನಿ ಹಿನ್ನೀರು ಪ್ರದೇಶದಲ್ಲಿ ತಾಯಿ ಹುಲಿಯೊಂದು ತನ್ನ ನಾಲ್ಕು ಮರಿಗಳೊಂದಿಗೆ ಹೊಂಡವೊಂದರಲ್ಲಿ ನೀರು ಕುಡಿಯುತ್ತಿರುವ ದೃಶ್ಯ ಮನಮೋಹಕ. ವನ್ಯಜೀವಿಗಳನ್ನು ಅವುಗಳ ಪರಿಸರದಲ್ಲಿ ನೋಡುವುದೇ ಆಹ್ಲಾದಕರಕ ಅನುಭವ. ಈ ಹುಲಿಯಮ್ಮ ಮೊದಲ ಬಾರಿಗೆ ತಾಯಿಯಾಗಿದ್ದಾಳೋ ಅಥವಾ ಇದಕ್ಕೂ ಮೊದಲು ಹೆತ್ತ ಮರಿಗಳು ಬೆಳೆದು ದೊಡ್ಡವಾಗಿ ತಮ್ಮ ದಾರಿಯನ್ನು ತಾವು ನೋಡಿಕೊಂಡಿದ್ದಾವೋ ಗೊತ್ತಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ನಾಗರಹೊಳೆ ಅಭಯಾರಣ್ಯದಲ್ಲಿ ವಿಹರಿಸಲು ಸಫಾರಿಗೆ ತೆರಳಿದ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಎದುರಾಯ್ತೊಂದು ಹುಲಿ!

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.