AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chikmagalur: ಎನ್ ಆರ್ ಪುರ ಭದ್ರಾ ಹಿನ್ನೀರು ಪ್ರದೇಶದಲ್ಲಿ ಬೀಡು ಬಿಟ್ಟ ಅನೆ ಹಿಂಡು, ಆತಂಕಗೊಂಡ ಸ್ಥಳೀಯರು

Chikmagalur: ಎನ್ ಆರ್ ಪುರ ಭದ್ರಾ ಹಿನ್ನೀರು ಪ್ರದೇಶದಲ್ಲಿ ಬೀಡು ಬಿಟ್ಟ ಅನೆ ಹಿಂಡು, ಆತಂಕಗೊಂಡ ಸ್ಥಳೀಯರು

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 07, 2023 | 11:31 AM

Share

ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಆನೆಗಳ ಹಿಂಡನ್ನು ಕಾಡಿಗಟ್ಟಲು ಸಾಕಷ್ಟು ಶ್ರಮ ಪಡಬೇಕಾಯಿತಂತೆ.

ಚಿಕ್ಕಮಗಳೂರು: ಪಳಗಿಸಿದ ಆನೆಗಳು (tamed elephants) ಸೌಮ್ಯವಾಗಿರುತ್ತವೆ ಅನ್ನೋದು ನಿಸ್ಸಂಶಯ ಆದರೆ ಕಾಡಿನಲ್ಲಿರುವ ಅನೆಗಳಿಗೆ ಈ ಮಾತಿ ಅನ್ವಯಿಸದು. ಕಾಡಾನೆಗಳು (wild elephants) ನಾಡಿಗೆ ನುಗ್ಗಿ ಆಮಾಯಕರನ್ನು ಬಲಿ ತೆಗೆದುಕೊಂಡ ಅನೇಕ ಪ್ರಕರಣಗಳು ನಮಗೆ ಗೊತ್ತಿವೆ. ಹಾಗಾಗಿ, ಕಾಡಾನೆಗಳನ್ನು ನೋಡಿದಾಕ್ಷಣ ಎಂಟೆದೆಯವರಿಗೂ ದಿಗಿಲಾಗುತ್ತದೆ, ಭಯವಾಗುತ್ತದೆ, ಆತಂಕ ಹುಟ್ಟಿಕೊಳ್ಳುತ್ತದೆ. ಜಿಲ್ಲೆಯ ಎನ್ ಆರ್ ಪುರಕ್ಕೆ ಹತ್ತಿರವಿರುವ ಭದ್ರಾ ಹಿನ್ನೀರು (Bhadra Backwaters) ಪ್ರದೇಶದಲ್ಲಿ ಕಾಡಾನೆಗಳ ಬೀಡು ಬಿಟ್ಟಿದ್ದರಿಂದ ಸ್ಥಳೀಯರಲ್ಲಿ ಸಹಜವಾಗೇ ಆತಂಕ ಉಂಟಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಆನೆಗಳ ಹಿಂಡನ್ನು ಕಾಡಿಗಟ್ಟಲು ಸಾಕಷ್ಟು ಶ್ರಮ ಪಡಬೇಕಾಯಿತಂತೆ. ವಿಡಿಯೋದಲ್ಲಿ ಗೋಚರಿಸುತ್ತಿರುವ ಆನೆಗಳನ್ನು ಹಿಂಡು ಅನ್ನೋದಕ್ಕಿಂತ ಒಂದು ಕುಟುಂಬ ಅಂತ ಹೇಳಿದರೆ ಹೆಚ್ಚು ಸೂಕ್ತವಾದೀತು. ಅಲ್ಲಿ ಒಟ್ಟು 5 ಆನೆಗಳಿವೆ-ಎರಡು ಮರಿಯಾನೆಗಳ ಜೊತೆ ಮಮ್ಮಿ-ಡ್ಯಾಡಿ ಮತ್ತೊಂದು ಅಂಕಲ್ ಅಥವಾ ಆಂಟಿ ಇರಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ