ವಿಜಯೇಂದ್ರ ರಾಜ್ಯಾಧ್ಯಕ್ಷನಾಗುವ ಮೊದಲು ಸಹ ಬಿಜೆಪಿಯಲ್ಲಿ ಅಶಿಸ್ತು ಇತ್ತು: ಕೆಎಸ್ ಈಶ್ವರಪ್ಪ, ಹಿರಿಯ ಬಿಜೆಪಿ ನಾಯಕ

ಸಮ್ಮಿಶ್ರ ಸರ್ಕಾರ ಉರುಳಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಶಾಸಕರು ಬಿಜೆಪಿ ಸೇರಿದ ಬಳಿಕ ಪಕ್ಷದಲ್ಲಿ ಶಿಸ್ತು ಎಕ್ಕುಟ್ಟಿ ಹೋಗಿದೆ ಅಂತ ಅವರು ಹೇಳಿದ್ದರು. ವಲಸಿಗರು ರೊಚ್ಚಿಗೆದ್ದ ಬಳಿಕ, ನಾನು ಹಾಗೆ ಹೇಳೇ ಇಲ್ಲ ಅಂದಿದ್ದರು. ನಾವು ಅವರು ಹಾಗೆ ಹೇಳಿದ್ದ ವಿಡಿಯೋ ಮತ್ತು ಹೇಳಿದ್ದನ್ನು ನಿರಾಕರಿಸಿದ ವಿಡಿಯೋ ಎರಡನ್ನೂ ಕ್ಲಬ್ ಮಾಡಿ ಕನ್ನಡಿಗರಿಗೆ ತೋರಿಸಿದ್ದೆವು!

ವಿಜಯೇಂದ್ರ ರಾಜ್ಯಾಧ್ಯಕ್ಷನಾಗುವ ಮೊದಲು ಸಹ ಬಿಜೆಪಿಯಲ್ಲಿ ಅಶಿಸ್ತು ಇತ್ತು: ಕೆಎಸ್ ಈಶ್ವರಪ್ಪ, ಹಿರಿಯ ಬಿಜೆಪಿ ನಾಯಕ
|

Updated on: Feb 19, 2024 | 6:24 PM

ಚಿತ್ರದುರ್ಗ: ಹಿರಿಯ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ (KS Eshwarappa) ಮಾತಾಡುವ ಭರದಲ್ಲಿ ತಮ್ಮ ಪಕ್ಷದ ಹುಳುಕುಗಳನ್ನು ಸಹ ಹೊರ ಹಾಕಿಬಿಡುತ್ತಾರೆ. ಅಂಥದೊಂದು ಪ್ರಸಂಗ ಇಂದು ಚಿತ್ರದುರ್ಗದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ನಡೆಯಿತು. ಬಿವೈ ವಿಜಯೇಂದ್ರ (BY Vijayendra) ರಾಜ್ಯಾಧ್ಯಕ್ಷರಾದ ಬಳಿಕ ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು (internal differences) ತಲೆದೋರಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಮೊದಲು ಅವರು ಅದ್ಯಾವದೂ ಇಲ್ಲ ಅಂತ ಹೇಳಿ ವಿಜಯೇಂದ್ರ ಅಧ್ಯಕ್ಷನಾಗುವ ಮೊದಲು ಎಲ್ಲ ಸರಿಯಿತ್ತಾ? ಎಂದು ಮರುಪ್ರಶ್ನೆ ಹಾಕುತ್ತಾರೆ. ತಮ್ಮ ಪಕ್ಷದ ಭಾರೀ ಶಿಸ್ತಿದೆ ಅಂತೇನೂ ಹೇಳಲ್ಲ, ಚಿಕ್ಕಪುಟ್ಟ ಅಸಮಾಧಾನ, ಭಿನ್ನಾಭಿಪ್ರಾಯ ತಮ್ಮಲ್ಲಿವೆ ಎಂದು ಈಶ್ವರಪ್ಪ ಹೇಳುತ್ತಾರೆ. ಆದರೆ ಮೊದಲು ಅವ್ಯಾವೂ ಪಕ್ಷದಲ್ಲಿರಲಲ್ಲ, ಬಿಜೆಪಿ ಪಕ್ಷ ಈಗ ಬೆಳೆಯುತ್ತಿರುವುದರಿಂದ ಬೇರೆ ಪಕ್ಷದ ನಾಯಕರು ಬಂದು ಸೇರ್ಪಡೆಗೊಳ್ಳುತ್ತಿದ್ದಾರೆ ಅನ್ನುತ್ತಾರೆ. ಅವರ ಮಾತಿನ ಅರ್ಥ ಬೇರೆ ಪಕ್ಷಗಳ ನಾಯಕರಿಂದ ಪಕ್ಷದ ಶಿಸ್ತು ಹಾಳಾಗುತ್ತಿದೆಯೇ? ನಿಮಗೆ ನೆನಪಿರಬಹದು, ಹಿಂದೆ ಇದೇ ಬಗೆಯ ಮಾತನ್ನು ಹೇಳಿ ಅವರು ವಿವಾದಕ್ಕೀಡಾಗಿದ್ದರು. ಸಮ್ಮಿಶ್ರ ಸರ್ಕಾರ ಉರುಳಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಶಾಸಕರು ಬಿಜೆಪಿ ಸೇರಿದ ಬಳಿಕ ಪಕ್ಷದಲ್ಲಿ ಶಿಸ್ತು ಎಕ್ಕುಟ್ಟಿ ಹೋಗಿದೆ ಅಂತ ಅವರು ಹೇಳಿದ್ದರು. ವಲಸಿಗರು ರೊಚ್ಚಿಗೆದ್ದ ಬಳಿಕ, ನಾನು ಹಾಗೆ ಹೇಳೇ ಇಲ್ಲ ಅಂದಿದ್ದರು. ನಾವು ಅವರು ಹಾಗೆ ಹೇಳಿದ್ದ ವಿಡಿಯೋ ಮತ್ತು ಹೇಳಿದ್ದನ್ನು ನಿರಾಕರಿಸಿದ ವಿಡಿಯೋ ಎರಡನ್ನೂ ಕ್ಲಬ್ ಮಾಡಿ ಕನ್ನಡಿಗರಿಗೆ ತೋರಿಸಿದ್ದೆವು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
 ದುಡ್ಡಿನ ವಿಷಯದಲ್ಲಿ ದರ್ಶನ್ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು
 ದುಡ್ಡಿನ ವಿಷಯದಲ್ಲಿ ದರ್ಶನ್ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು
ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್
ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್