‘ಹೇಸಿಗೆ ಕಾಮಿಡಿ ಇರಬಾರದು’: ತುಕಾಲಿ ಸಂತೋಷ್​ ಬಗ್ಗೆ ಪ್ರಶಾಂತ್​ ಸಂಬರ್ಗಿ ಹೀಗೆ ಹೇಳಿದ್ದೇಕೆ?

| Updated By: ಮದನ್​ ಕುಮಾರ್​

Updated on: Nov 17, 2023 | 2:30 PM

ಬಿಗ್ ಬಾಸ್​ ಮನೆಯಲ್ಲಿ ಆಟ ಹೇಗೆ ನಡೆಯುತ್ತದೆ ಎಂಬ ಬಗ್ಗೆ ಪ್ರಶಾಂತ್​ ಸಂಬರ್ಗಿ ಅವರಿಗೆ ತಿಳಿದಿದೆ. ದೊಡ್ಮನೆ ಒಳಗಿನ ಆಟವು ಹೊರ ಜಗತ್ತಿನಲ್ಲಿ ಯಾವ ರೀತಿ ಬಿಂಬಿತ ಆಗುತ್ತದೆ ಎಂಬ ಬಗ್ಗೆಯೂ ಅವರಿಗೆ ಅರಿವಿದೆ. ಈ ಸೀಸನ್​ನಲ್ಲಿ ಸ್ಪರ್ಧಿಸುತ್ತಿರುವ ತುಕಾಲಿ ಸಂತೋಷ್​ ಅವರ ಕಾಮಿಡಿ ಸರಿಯಿಲ್ಲ ಎಂದು ಪ್ರಶಾಂತ್​ ಸಂಬರ್ಗಿ ಹೇಳಿದ್ದಾರೆ.

‘ಬಿಗ್​ ಬಾಸ್​ ಕನ್ನಡ’ (Bigg Boss Kannada) ರಿಯಾಲಿಟಿ ಶೋನ ಕಳೆದ ಸೀಸನ್​ನಲ್ಲಿ ಪ್ರಶಾಂತ್​ ಸಂರ್ಬಗಿ ಅವರು ಸ್ಪರ್ಧಿಸಿದ್ದರು. ಆದರೆ ಟ್ರೋಫಿ ಗೆಲ್ಲಲು ಅವರಿಗೆ ಸಾಧ್ಯವಾಗಿರಲಿಲ್ಲ. ಈಗ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಸ್ಪರ್ಧಿಗಳ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಬಿಗ್ ಬಾಸ್​ ಮನೆಯಲ್ಲಿ ಆಟ ಯಾವ ರೀತಿ ನಡೆಯುತ್ತದೆ ಎಂಬ ಬಗ್ಗೆ ಪ್ರಶಾಂತ್​ ಸಂಬರ್ಗಿ (Prashanth Sambargi) ಅವರಿಗೆ ತಿಳಿದಿದೆ. ದೊಡ್ಮನೆ ಒಳಗಿನ ಆಟವು ಹೊರ ಜಗತ್ತಿನಲ್ಲಿ ಯಾವ ರೀತಿ ಬಿಂಬಿತವಾಗುತ್ತದೆ ಎಂಬ ಬಗ್ಗೆಯೂ ಅವರಿಗೆ ಅರಿವಿದೆ. ಈ ಸೀಸನ್​ನಲ್ಲಿ ಸ್ಪರ್ಧಿಸುತ್ತಿರುವ ತುಕಾಲಿ ಸಂತೋಷ್​ (Tukali Santhosh) ಅವರ ಕಾಮಿಡಿ ಸರಿಯಿಲ್ಲ ಎಂದು ಪ್ರಶಾಂತ್​ ಸಂಬರ್ಗಿ ಹೇಳಿದ್ದಾರೆ. ‘ಅತಿಯಾದ ಕಾಮಿಡಿ ಕೂಡ ವಿಷ ಆಗುತ್ತದೆ. ಬ್ಯಾಲೆನ್ಸ್​ ಆದಂತಹ, ಸೂಕ್ಷ್ಮವಾದಂತಹ ಕಾಮಿಡಿ ಇರಬೇಕು. ಎಲ್ಲರೂ ಒಪ್ಪುವಂತಹ ಕಾಮಿಡಿ ಬೇಕು. ಹೇಸಿಗೆ ಬರುವಂತಹ ಕಾಮಿಡಿ ಆಗಿರಬಾರದು’ ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on