ಗಮನಸೆಳೆದ ಶತಾಯುಷಿ ಅಜ್ಜಿಯ 100ನೇ ಬರ್ತಡೇ ಸಂಭ್ರಮಾಚರಣೆ, ವಿಡಿಯೋ ನೋಡಿ

Edited By:

Updated on: Jun 24, 2025 | 9:01 PM

ಇತ್ತೀಚಿಗೆ ಮನುಷ್ಯನ ಆಯುಷ್ಯ ಕುಸಿಯುತ್ತ ಸಾಗಿದೆ. ಅಕಾಲಿಕ ಸಾವಿನಿಂದ ಅಲ್ಪಾಯುಷಿಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಆದ್ರೆ, ಇದೇ ವೇಳೆ ಕೋಟೆನಾಡಿನಲ್ಲಿ ಶತಾಯುಷಿ ಅಜ್ಜಿಯ ಬರ್ತಡೇ ಸಂಭ್ರಮಾಚರಣೆ ಎಲ್ಲರ ಗಮನಸೆಳೆದಿದೆ. ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಶತಾಯುಷಿ ಬಂದಮ್ಮ ಅವರ ನೂರನೇ ಜನ್ಮ ದಿನವನ್ನು ಅದ್ಧೂರೊಯಾಗಿ ಆಚರಿಸಲಾಗಿದೆ. ಹಿಂದಿನ ಕಾಲದವರ ಟೆನ್ಷನ್ ಲೆಸ್ ಬದುಕು, ಉತ್ತಮ ಆಹಾರ ಪದ್ಧತಿ ಮತ್ತು ಶ್ರಮಜೀವನವೇ ಬಂದಮ್ಮ ಅವರ ದೀರ್ಘಾಯುಷ್ಯದ ಗುಟ್ಟು ಎಂಬ ಮಾತು ಈ ಸಂದರ್ಭದಲ್ಲಿ ಕೇಳಿ ಬಂದಿದ್ದು ಬಂದಮ್ಮ ಅವರ ಜನ್ಮದಿನಾಚರಣೆಯ ಸಾರ್ಥಕತೆ ಆಗಿದೆ.

ಚಿತ್ರದುರ್ಗ, (ಜೂನ್ 24): ನೂರಾರು ಕುಟುಂಬಸ್ಥರ ಮದ್ಯೆ ಶತಾಯುಷಿ ಅಜ್ಜಿಯ ಬರ್ತಡೇ ಸಂಭ್ರಮ. ಕೇಕ್ ಕತ್ತರಿಸಿ ಸಿಹಿ ಹಂಚಿದ ದೀರ್ಘಾಯುಷಿ ಬಂದಮ್ಮ. ದೊಡ್ಡಪೇಟೆಯ ಗೌಡ್ರ ವಂಶಸ್ಥರಿಂದ ಹಿರಿಯಜ್ಜಿಯ ಜನ್ಮ ಶತಮಾನೋತ್ಸವ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ. ಹೌದು, ಸ್ವತಂತ್ರ ಪೂರ್ವದಲ್ಲಿ ಅಂದರೆ 1925ರಲ್ಲಿ ಜನಿಸಿದ ಬಂದಮ್ಮ(100) ಗೌಡ್ರ ವಂಶದವರು. ಏಳು ಜನ ಮಕ್ಕಳಿದ್ದು ಮೂವರು ಗಂಡು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳು. ಮಕ್ಕಳು , ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳನ್ನು ಬಂದಮ್ಮ ಅಜ್ಜಿ ಕಂಡಿದ್ದಾರೆ. ಈಗಲೂ ಉತ್ತಮ ನೆನಪಿನ ಶಕ್ತಿ ಹೊಂದಿದ್ದ ಸಂಸ್ಕೃತಿ, ಪರಂಪರೆ, ಸಂಸ್ಕಾರ ಹೇಳಿ ಕೊಡುತ್ತಾರೆ. ಮದುವೆ ಸಂದರ್ಭದಲ್ಲೇ ನಮಗೆ ಗೊತ್ತಿಲ್ಲದ ಎಷ್ಟೋ ಆಚರಣೆಗಳು ಹೇಳಿಕೊಟ್ಟರೆಂದು ನೆನೆಯುತ್ತಾರೆಂದು ಮರಿಮೊಮ್ಮಗಳು ಡಾ.ಸುಶ್ಮಿತಾ ಸ್ಮರಿಸಿದರೆ, ಹೆತ್ತಮ್ಮಳ ಬಗ್ಗೆ ಮಗಳು ರತ್ನ ಹೆಮ್ಮೆ ಪಡುತ್ತಾರೆ.

ಇನ್ನು ಬಂದಮ್ಮ ಅವರ ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳೇ 70ಕ್ಕೂ ಹೆಚ್ಚು ಜನ ಆಗುತ್ತಾರೆ. ಸಂಬಂಧಿಕರು ಸೇರಿ ನೂರಾರು ಜನ ಒಂದೆಡೆ ಸೇರ ಶತಾಯುಷಿಯ ಬರ್ತಡೇ ಸೆಲೆಬ್ರಿಟ್ ಮಾಡಿದ್ದಾರೆ. ಕೇಕ್ ಕತ್ತರಿಸಿ ಸಿಹಿ ಹಂಚಿಕೊಂಡಿದ್ದಾರೆ. ಅಲ್ಲದೆ ಕುಟುಂವಸ್ಥರೆಲ್ಲ ಸೇರಿ ಶುಭ ಕಾರ್ಯಕ್ರಮದಂತೆ ಭೋಜನ ಸವಿದು ಸಂಭ್ರಮಿಸಿದ್ದಾರೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಶತಾಯುಷಿ ಬಂದಮ್ಮ ಅವರ ನೂರನೇ ಜನ್ಮ ದಿನವನ್ನು ಅದ್ಧೂರೊಯಾಗಿ ಆಚರಿಸಲಾಗಿದೆ. ಹಿಂದಿನ ಕಾಲದವರ ಟೆನ್ಷನ್ ಲೆಸ್ ಬದುಕು, ಉತ್ತಮ ಆಹಾರ ಪದ್ಧತಿ ಮತ್ತು ಶ್ರಮಜೀವನವೇ ಬಂದಮ್ಮ ಅವರ ದೀರ್ಘಾಯುಷ್ಯದ ಗುಟ್ಟು ಎಂಬ ಮಾತು ಈ ಸಂದರ್ಭದಲ್ಲಿ ಕೇಳಿ ಬಂದಿದ್ದು ಬಂದಮ್ಮ ಅವರ ಜನ್ಮದಿನಾಚರಣೆಯ ಸಾರ್ಥಕತೆ ಆಗಿದೆ.

Follow Us
Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More