BJP MLA feels the heat: ಸಿದ್ದರಾಮಯ್ಯರನ್ನು ‘ಮುಗಿಸಿಬಿಡುವ’ ಹೇಳಿಕೆ ನೀಡಿದ್ದ ಡಾ ಸಿಎನ್ ಅಶ್ವಥ್ ನಾರಾಯಣ ವಿರುದ್ಧ ಎಫ್ಐಆರ್!
ಅಶ್ವಥ್ ನಾರಾಯಣ ವಿರೋಧ ಪಕ್ಷದ ಶಾಸಕ! ಲಕ್ಷ್ಮಣ್ ತಾವು ದೂರು ಸಲ್ಲಿಸಿದ್ದ ಠಾಣೆಗೆ ತೆರಳಿ ಎಫ್ಐಆರ್ ದಾಖಲಾಗುವುದನ್ನು ಖಚಿತಪಡಿಸಿಕೊಂಡಿದ್ದಾರೆ.
ಮೈಸೂರು: ಚುನಾವಣೆಗಿಂತ ಮುಂಚೆ ನಡೆದ ಸಂಗತಿಯನ್ನು ನಿರೀಕ್ಷಿಸಲಾಗಿತ್ತು ಮತ್ತು ಚುನಾವಣೆ ಇದೆಲ್ಲ ನಡೆಯಲಿದೆ ಅಂತಲೂ ನಿರೀಕ್ಷಿಸಲಾಗಿತ್ತು. ಸರ್ಕಾರದ ಪ್ರತಿನಿಧಿಗಳು ನಡೆಸುವ ಆಟಗಳಲ್ಲಿ ಅಸಲು ಇಕ್ಕಟ್ಟಿಗೆ, ಸಮಸ್ಯೆಗೆ ಸಿಲುಕುವವರು ಸರ್ಕಾರೀ ಅಧಿಕಾರಿಗಳು. ಚುನಾವಣೆಗೆ ಮೊದಲು ಆಗ ಮಿನಿಸ್ಟ್ರಾಗಿದ್ದ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಟಿಪ್ಪು ಸುಲ್ತಾನನನ್ನು ಕೊಂದ ಹಾಗೆ ಆಗ ವಿರೋಧಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯರ (Siddaramaiah) ಕತೆಯನ್ನೂ ಮುಗಿಸಿಬಿಡಿ ಅಂತ ಅತ್ಯಂತ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದರು. ಕೂಡಲೇ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ (M Laxman) ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರೂ ಎಫ್ಐಆರ್ ದಾಖಲಾಗಿರಲಿಲ್ಲ. ಆದರೆ ಈಗ ಗೇಮ್ ಉಲ್ಟಾ ಅಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾರೆ ಮತ್ತು ಅಶ್ವಥ್ ನಾರಾಯಣ ವಿರೋಧ ಪಕ್ಷದ ಶಾಸಕ! ಲಕ್ಷ್ಮಣ್ ತಾವು ದೂರು ಸಲ್ಲಿಸಿದ್ದ ಠಾಣೆಗೆ ತೆರಳಿ ಬಿಜೆಪಿ ಶಾಸಕನ ವಿರುದ್ಧ ಎಫ್ಐಆರ್ ದಾಖಲಾಗುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಪಾಪ ಪೊಲೀಸ್ ಆಧಿಕಾರಿಯ ಅವಸ್ಥೆ ಯಾರಿಗೂ ಬೇಡ ಮಾರಾಯ್ರೇ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಡಿಕೆ ಶಿವಕುಮಾರ್ ಹಾಗೂ ಕೆಎನ್ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ

